‘ವಿದೇಶಾಂಗ ನೀತಿಗೆ ಹೊಸ ಅರ್ಥ ಕೊಟ್ಟ ಸುಷ್ಮಾ’ ಎಸ್‌.ಎಂ ಕೃಷ್ಣ ಕಂಬನಿ

Published : Aug 07, 2019, 06:01 PM ISTUpdated : Aug 07, 2019, 06:04 PM IST
‘ವಿದೇಶಾಂಗ ನೀತಿಗೆ ಹೊಸ ಅರ್ಥ ಕೊಟ್ಟ ಸುಷ್ಮಾ’ ಎಸ್‌.ಎಂ ಕೃಷ್ಣ ಕಂಬನಿ

ಸಾರಾಂಶ

ಬಿಜೆಪಿ ಹಿರಿಯ ನಾಯಕಿ, ಸಂಸದೀಯ ಪಟು ಸುಷ್ಮಾ ಸ್ವರಾಜ್ ನಿಧನಕ್ಕೆ ಮುತ್ಸದ್ಧಿ ರಾಜಕಾರಣಿ ಎಸ್.ಎಂ. ಕೃಷ್ಣ  ಕಂಬನಿ ಮಿಡಿದಿದ್ದಾರೆ.  ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಸುಷ್ಮಾ ತೆಗೆದುಕೊಳ್ಳುತ್ತಿದ್ದ ಸ್ಪಷ್ಟ ನೀತಿಗಳು ಎಂದೆಂದಿಗೂ ಮಾರ್ಗದರ್ಶಕ. ಅವರ ದೂರದೃಷ್ಟಿತ್ವ, ಮುಂದಾಲೋಚನೆಯ ಯೋಜನೆಗಳು ಸದಾ ಹಸಿರಾಗಿ ನಿಲ್ಲುತ್ತವೆ ಎಂದು ಹೇಳಿದ್ದಾರೆ.

ಬೆಂಗಳೂರು[ಆ. 07]  ಸುಷ್ಮಾ ಸ್ವರಾಜ್ ನಿಧನಕ್ಕೆ ಇಡೀ ದೇಶವೇ ಕಂಬನಿ ಮಿಡಿದಿದೆ. ಮಾಜಿ ವಿದೇಶಾಂಗ ಸಚಿವ, ಹಿರಿಯ ರಾಜಕಾರಣಿ ಎಸ್‌.ಎಂ.ಕೃಷ್ಣ ಸಂತಾಪ ಸೂಚಿಸಿದ್ದಾರೆ.

ದೇಶ ಒಬ್ಬರು ಅತಿದೊಡ್ಡ ನಾಯಕಿಯನ್ನು ಕಳೆದುಕೊಂಡಿದೆ. ಅಂತಾರಾಷ್ಟ್ರೀಯ ವಿಚಾರದ ಬಗ್ಗೆ ವಿಶೇಷ ಜ್ಞಾನ ಹೊಂದಿದ್ದರು. ಭಾರತದ ಸಂಪ್ರಾಯಗಳನ್ನು ವಿದೇಶಗಳಿಗೂ ವಿಸ್ತರಿಸಿದ್ದರು ಎಂದು ಸ್ಮರಿಸಿಕೊಂಡಿದ್ದಾರೆ.

ಬಳ್ಳಾರಿ- ಸುಷ್ಮಾ ಸ್ವರಾಜ್ ನಂಟನ್ನು ಮೆಲುಕು ಹಾಕಿದ ವೈದ್ಯ ದಂಪತಿ

ವಿದೇಶಾಂಗ ಇಲಾಖೆಯಯನ್ನು ಅವರು ನಿರ್ವಹಿಸಿದ ರೀತಿಯನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ವಿದೇಶಗಳೊಂದಿಗೆ ಒಪ್ಪಂದ ಮಾಡಿಕೊಳ್ಳುವ ಸಂದರ್ಭ ಸುಷ್ಮಾ ತೆಗೆದುಕೊಳ್ಳುತ್ತಿದ್ದ ಸ್ಪಷ್ಟ ನೀತಿಗಳು ಎಂದೆಂದಿಗೂ ಮಾರ್ಗದರ್ಶಕ. ಅವರ ದೂರದೃಷ್ಟಿತ್ವ, ಮುಂದಾಲೋಚನೆಯ ಯೋಜನೆಗಳು ಸದಾ ಹಸಿರಾಗಿ ನಿಲ್ಲುತ್ತವೆ ಎಂದು  ಹೇಳಿದ್ದಾರೆ.

ಮಿಲಿಟರಿ, ಡಿಪ್ಲೋಮಸಿ, ವಿದೇಶದಲ್ಲಿದ್ದ ಭಾರತೀಯರ ಹಕ್ಕು ರಕ್ಷಣೆ, ಯಮನ್ ಮತ್ತು ಇಥಿಯೋಪಿಯಾ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರ ಎಲ್ಲವೂ ಅವರನ್ನು ಶ್ರೇಷ್ಠ ಸ್ಥಾನಕ್ಕೆ ಕೊಂಡೊಯ್ದಿದ್ದವು ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು
ದಶದಿಕ್ಕುಗಳಿಂದ ಕರ್ನಾಟಕಕ್ಕೆ ಡ್ರಗ್ಸ್‌ ಗಂಡಾಂತರ