
ಬಳ್ಳಾರಿ(ಜ.11): ವಿಶ್ವ ಪ್ರಸಿದ್ದ ಹಂಪಿಗೆ ಪ್ರವಾಸಕ್ಕೆ ಬಂದಿದ್ದ ವಿದೇಶಿಗರಿಂದ ಬಳ್ಳಾರಿಯ ಹೊಸಪೇಟೆ ಬಸ್ ನಿಲ್ದಾಣದಲ್ಲಿ ಭೀಕ್ಷಾಟನೆ ಮಾಡಿದ ಪ್ರಸಂಗ ನಡೆದಿದೆ. ವಿವಿಧ ದೇಶಗಳಿಂದ ಪ್ರವಾಸಕ್ಕೆ ಬಂದಿದ್ದ 100 ಜನರ ರಾಂಬೋ ಪ್ಯಾಮೀಲಿ ಎನ್ನುವ ವಿದೇಶಿ ತಂಡ ಬಸ್ ನಿಲ್ದಾಣದಲ್ಲಿ ತಮ್ಮ ಕಲೆಗಳನ್ನ ಪ್ರದರ್ಶಿಸುತ್ತ ಭೀಕ್ಷಾಟನೆ ಮಾಡಿದರು.
ನೆರೆದ ಜನರಮುಂದೆ ಕಲೆಯನ್ನ ಪ್ರದರ್ಶಿಸುತ್ತಾ ನಾವು ಚೆನ್ನೈನ ಕೋಡೆಕೆನಾಲ್'ಗೆ ಹೋಗಬೇಕು ನಮಗೆ ಧನ ಸಹಾಯ ಮಾಡಿ ಎಂದು ಅಂಗಲಾಚಿದರು.ಸಾರ್ವಜನಿಕರಿಗೆ ತೊಂದರೆಯಾಗಿದ್ದರಿಂದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ವಿಚಾರಣೆ ಮಾಡಿದಾಗ ನಾವು ವಿಶ್ವಶಾಂತಿಗಾಗಿ ವಿಶ್ವಪರ್ಯಾಟನೆ ಮಾಡುತ್ತಿದ್ದೇವೆ ಇದರಿಂದ ಸಾರ್ವಜಿಕರಿಂದ ಧನ ಸಹಾಯ ಕೋರಿದ್ದೇವೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.