ಲೋಕಸಭೆಯಿಂದ 6 ಜನ ಕಾಂಗ್ರೆಸ್ ಸಂಸದರ ಅಮಾನತು

Published : Jul 24, 2017, 03:44 PM ISTUpdated : Apr 11, 2018, 01:00 PM IST
ಲೋಕಸಭೆಯಿಂದ 6 ಜನ ಕಾಂಗ್ರೆಸ್ ಸಂಸದರ ಅಮಾನತು

ಸಾರಾಂಶ

ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.

ನವದೆಹಲಿ (ಜು.24): ಲೋಕಸಭೆಯಲ್ಲಿ ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದ ಆರು ಸಂಸದರನ್ನು ಸ್ಪೀಕರ್ ಸುಮಿತ್ರಾ ಮಹಾಜನ್ ಇಂದಿನಿಂದ 5 ದಿನಗಳವರೆಗೆ ಅಮಾನತುಗೊಳಿಸಿದ್ದಾರೆ. ಗೌರವ್ ಗೋಗೋಯ್, ಸುಶ್ಮಿತಾ ದೇವ್, ರಣಜೀತ್ ರಂಜನ್, ಅಧೀರ್ ರಂಜನ್, ಕೆ ಸುರೇಶ್ ಹಾಗೂ ಕೆ.ರಾಘವನ್ ಅಮಾನತುಗೊಂಡ ಸಂಸದರು.

ಇತ್ತೀಚಿಗೆ ನಡೆಯುತ್ತಿರುವ ಗೋರಕ್ಷಣೆ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆ, ಬೋಫೊರ್ಸ್ ಪ್ರಕರಣಗಳ ಬಗ್ಗೆ ಲೋಕಸಭೆಯಲ್ಲಿ ಚರ್ಚಿಸುತ್ತಿರುವ ವೇಳೆ ಈ ಸಂಸದರು ಸ್ಪೀಕರ್ ಕುರ್ಚಿಯೆಡೆಗೆ ಪೇಪರ್ ಎಸೆದು ಕಲಾಪಕ್ಕೆ ಅಡ್ಡಿಪಡಿಸಲು ಯತ್ನಿಸಿದರು. ಹಾಗಾಗಿ ಸುಮಿತ್ರಾ ಮಹಾಜನ್ 6 ಮಂದಿ ಸಂಸದರನ್ನು ಅಮಾನತುಗೊಳಿಸಿದರು. ಇದರಿಂದ ಕುಪಿತಗೊಂಡ ಪ್ರತಿಪಕ್ಷ ನಾಯಕರು ಸದನದ ಬಾವಿಗಿಳಿದು ಘೋಷಣೆ ಕೂಗಿದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕರ್ನಾಟಕದ ನೆಲದಲ್ಲಿ ಕೋಟಿ ಕೋಟಿ ಸಂಪತ್ತು? ಯಾವ ಜಿಲ್ಲೆಗಳಲ್ಲಿದೆ ಚಿನ್ನ, ವಜ್ರದ ನಿಕ್ಷೇಪ?
'ನೀವು ಎಂಎಲ್ಸಿ ಅನ್ನೋಕೆ ಸಾಕ್ಷಿ ಏನು?' Keshav Prasad ಕಾರು ತಡೆದ ಟೋಲ್ ಸಿಬ್ಬಂದಿ, ಒಂದು ಗಂಟೆ ಕಾಲ ಕಿರಿಕ್!