
ಮೂಡಬಿದ್ರೆ (ಜ.02): "ದೇಶ್ ಕೊ ನೇತಾ ನಹೀ ನೀತಿ ಚಾಹಿಯೆ" (ದೇಶಕ್ಕೆ ನಾಯಕ ಬೇಡ, ನೀತಿ ಬೇಕು) ಎಂದು ಮೂಡುಬಿದಿರೆಯಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಸೀತಾರಾಮ ಯಚೂರಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರ ರಹಿತ ಸರ್ಕಾರ ನಿರ್ಮಾಣ ಮಾಡುತ್ತೇವೆ ಎಂದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧಿಕಾರವಿರುವ ರಾಜ್ಯಗಳ ಯಾವುದೇ ಭ್ರಷ್ಟಾಚಾರ ಅವ್ಯವಹಾರವನ್ನು ತನಿಖೆ ಮಾಡಿಲ್ಲ. ನಿಜವಾದ ಅರ್ಥದಲ್ಲಿ ಇವರೇ ದೇಶದ ಸಂಪತ್ತನ್ನು ಲೂಟಿ ಮಾಡುತ್ತಿದ್ದಾರೆ ಯಚೂರಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.
ಎಸ್'ಬಿಐ ಇಂತಿಷ್ಟು ಹಣ ಇಡಲೇಬೇಕು ಎಂದು 1700 ಕೋಟಿ ರೂ ಜನರ ಹಣವನ್ನು ಇಟ್ಟುಕೊಂಡಿದೆ. ಆದರೆ 11 ಲಕ್ಷ ಕೋಟಿ ವಸೂಲು ಮಾಡಲಾಗದ ಸಾಲವನ್ನು ಬಂಡವಾಳಶಾಹಿ ಕಂಪನಿಗಳಿಗೆ ನೀಡಲಾಗಿದೆ. ಅದರ ಅರ್ಧ ಹಣ ದೇಶದ ಅಭಿವೃದ್ಧಿಗೆ ಸಾಕು. ಮೋದಿ, ಷಾ ತಾವು ಸೋಲಿಸಲಾಗದ ಅಶ್ವಮೇಧ ಮಾಡುತ್ತಿದ್ದೇವೆ ಅಂದುಕೊಂಡಿದ್ದಾರೆ. ಅಂದು ರಾಮನ ಅಶ್ವಮೇಧವನ್ನು ಅವನದೇ ಅವಳಿ ಮಕ್ಕಳು ತಡೆದಿದ್ದರು. ಈಗ ಇವರು ಅಂದುಕೊಂಡಿರೋ ಅಶ್ವಮೇಧವನ್ನು ಅವಳಿ ಶಕ್ತಿಗಳಾದ ರೈತರು, ಕಾರ್ಮಿಕರು ತಡಿದೇ ತಡೆಯುತ್ತಾರೆ ಎಂದು ಸೀತಾರಾಮ್ ಯೆಚೂರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.