
ಚೆನ್ನೈ(ಅ.31): ಪರೀಕ್ಷೆಯಲ್ಲಿ ರ್ಯಾಂಕ್ ಪಡೆಯುವ ಮಕ್ಕಳನ್ನು ಪೋಷಕರು ಗಿಫ್ಟ್ ಕೊಟ್ಟು ಸಂತುಷ್ಟ ಪಡಿಸುತ್ತಾರೆ. ಆದರೆ, ತಮಿಳುನಾಡಿನಲ್ಲಿ ಶಿಕ್ಷಕಿಯೊಬ್ಬರು ಮಕ್ಕಳು ಹೆಚ್ಚು ಅಂಕ ಪಡೆಯುವುದನ್ನು ಉತ್ತೇಜಿಸಲು ವಿಮಾನ ಪ್ರಯಾಣದ ಆಫರ್ ನೀಡಿದ್ದಾರೆ.
ಪೆರುಂತಲೈವರ್ ಸರ್ಕಾರಿ ಬಾಲಕಿಯರ ಪ್ರೌಢಶಾಲೆಯ ಸಮಾಜ ವಿಜ್ಞಾನ ಶಿಕ್ಷಕಿ ಸೆಲ್ವ ಕುಮಾರಿ ಎನ್ನುವವರು ೧೦ನೇ ತರಗತಿಯಲ್ಲಿ ೧೦೦ಕ್ಕೆ ನೂರು ಅಂಕ ಪಡೆಯುವ ಬಾಲಕಿ ಯರಿಗೆ ವಿಮಾನದಲ್ಲಿ ಕರೆದೊಯ್ಯುವುದಾಗಿ ‘ರವಸೆ ನೀಡಿದ್ದರು. ಹೀಗಾಗಿ ಪರೀಕ್ಷೆಯಲ್ಲಿ ೧೦೦ ಅಂಕ ಪಡೆದ ಸರನ್ಯಾ ಮತ್ತು ಯಮುನಾ ಎಂಬ ಇಬ್ಬರು ಬಾಲಕಿ ಯರು ಮೊದಲ ಬಾರಿ ವಿಮಾನ ಹತ್ತಿ ಸಂತಸಪಟ್ಟಿದ್ದಾರೆ. ಇದಕ್ಕಾಗಿ ಶಿಕ್ಷಕಿ ೭,೦೦೦ ರು. ಖರ್ಚು ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.