
ನವದೆಹಲಿ[ಅ.02]: ದೇಶದ ಮೊದಲ ಖಾಸಗಿ ರೈಲು ತೇಜಸ್ ಎಕ್ಸ್ಪ್ರೆಸ್ ನಿಗದಿತ ಸಮಯಕ್ಕಿಂತ ವಿಳಂಬವಾದಲ್ಲಿ ಪ್ರಯಾಣಿಕರಿಗೆ ಆರ್ಥಿಕ ಪರಿಹಾರ ನೀಡಲಿದೆ ಎಂದು ಐಆರ್ಸಿಟಿಸಿ ತಿಳಿಸಿದೆ. ಇಂತಹ ಕೊಡುಗೆ ನೀಡಿದ ದೇಶದ ಮೊದಲ ರೈಲಾಗಿದೆ.
ಶೀಘ್ರ ದೆಹಲಿ ಮತ್ತು ಲಖನೌ ನಡುವೆ ಖಾಸಗಿ ರೈಲು ಸಂಚಾರ
ತೇಜಸ್ ಎಕ್ಸ್ಪ್ರೆಸ್ ರೈಲು ನಿಗದಿಗಿಂತ 1 ಗಂಟೆ ಅಧಿಕ ವಿಳಂಬವಾದಲ್ಲಿ 100 ರು., 2 ಗಂಟೆ ಅಧಿಕ ತಡವಾದಲ್ಲಿ 250 ರು. ಪರಿಹಾರ ಮೊತ್ತ ನೀಡಲಿದೆ. ಅಲ್ಲದೇ ಪ್ರಯಾಣಿಕರಿಗೆ 25 ಲಕ್ಷ ಉಚಿತ ಜೀವವಿಮೆ ಸೌಲಭ್ಯದ ಜತೆಗೆ, ಪ್ರಯಾಣದ ವೇಳೆ ವಸ್ತುಗಳು ಕಳ್ಳತನ, ದರೋಡೆ ನಡೆದರೆ 1 ಲಕ್ಷ ರು. ವಿಮೆಯೂ ಒಳಗೊಂಡಿದೆ.
ಖಾಸಗಿ ರೈಲಿನ ಟಿಕೆಟ್ ದರ ವಿಮಾನಕ್ಕಿಂತ ಶೇ.50 ಅಗ್ಗ!
ತೇಜಸ್ ಎಕ್ಸ್ಪ್ರೆಸ್ ಅಕ್ಟೋಬರ್ 4 ರಂದು ಚಾಲನೆ ನೀಡಲಾಗುವುದು. ಅ.5 ರಿಂದ ವಾರದಲ್ಲಿ 6 ದಿನ ದೆಹಲಿ-ಲಖನೌ ಮಧ್ಯೆ ಸಂಚಾರ ಆರಂಭಿಸಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.