
ರಿಪ್ಪನ್ಪೇಟೆ(ನ.06): ಸಮೀಪದ ಅತಿಶಯ ಕ್ಷೇತ್ರ ಹೊಂಬುಜದಲ್ಲಿ ಭಗವಾನ್ ಪಾರ್ಶ್ವನಾಥ ಸ್ವಾಮಿ ಮತ್ತು ಜಗನ್ಮಾತೆ ಪದ್ಮಾವತಿ ಅಮ್ಮನವರ ಮಹಾಸನ್ನಿಧಿಯಲ್ಲಿ ಜಗದ್ಗುರು ದೇವೇಂದ್ರಕೀರ್ತಿ ಭಟ್ಟಾರಕ ಸ್ವಾಮೀಜಿ ಮಾರ್ಗದರ್ಶನದಲ್ಲಿ ಪ್ರಪ್ರಥಮ ಬಾರಿಗೆ ಜಿನಸಹಸ್ರನಾಮ ಆರಾಧನಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಪ್ರಥಮ ದಿನವಾದ ಸೋಮವಾರ ಸ್ವಾಮೀಜಿ ಧ್ವಜಾರೋಹಣದೊಂದಿಗೆ ಚಾಲನೆ ನೀಡಿದರು. ವಾತ್ಸಲ್ಯಮೂರ್ತಿ ಆಚಾರ್ಯ ಗುಣನಂದಿ ಮುನಿಮಹಾರಾಜರಿಂದ ದೀಕ್ಷಿತರಾದ ಪರಮಪೂಜ್ಯ ಆರ್ಯಿಕಾ ಆದಿತ್ಯಶ್ರೀ ಮಾತಾಜಿ, ಆರ್ಯಿಕಾ ದಿಶಾಶ್ರೀ ಮಾತಾಜಿ, ದೀಪ್ತಿಶ್ರೀ ಮಾತಾಜಿ ಹಾಗೂ ಆರ್ಯಿಕಾ ನಿತ್ಯಶ್ರೀ ಮಾತಾಜಿಗಳ ಸಂಘವು ಪಾವನ ಸಾನಿಧ್ಯ ವಹಿಸಿದ್ದರು.
ಮಂಗಳವಾದ್ಯ ಘೋಷ, ನಾಂದಿಮಂಗಳ, ಶ್ರೀಗಳ ನಿಮಂತ್ರಣ, ಇಂದ್ರಪ್ರತಿಷ್ಠೆ, ಕಂಕಣ ಬಂಧನ, ಮಂಗಳಕುಂಭ ನಯನ, ಪಂಚಾಮೃತ ಅಭಿಷೇಕ, ಶಾಂತಿಮಂತ್ರ, ಪೀಠಯಂತ್ರ ಆರಾಧನೆ, ಧ್ವಜಾರೋಹಣ, ಮಂಟಪವೇದಿ ಪ್ರತಿಷ್ಠಾ, ಅಖಂಡದೀಪ ಸ್ಥಾಪನಾ, ಮಂಗಳಕುಂಭ ಸ್ಥಾಪನಾ, ಪಂಚಕುಂಭ ವಿನ್ಯಾಸ, ಅಂಕುರಾರ್ಪಣ, ಶಾಂತಿಹೋಮ, ಜಿನಸಹಸ್ರನಾಮ ಆರಾಧನಾ ವಿಧಾನಪೂಜೆಗಳು ನೆರವೇರಿದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.