
ರಾಜ್ಯಸಭೆಯ ಮೊದಲ ಉಪಸಭಾಪತಿ ಸ್ಥಾನ ಅಲಂಕರಿಸಿದ್ದವರು ಕನ್ನಡಿಗ ಎಸ್.ವಿ. ಕೃಷ್ಣಮೂರ್ತಿ ರಾವ್. ಚನ್ನಗಿರಿಯವರಾದ ಅವರು 1952ರಿಂದ 1962ರವರೆಗೆ ರಾಜ್ಯಸಭೆ ಸದಸ್ಯರಾಗಿದ್ದರು. ಅಷ್ಟೂ ದಿವಸ ರಾಜ್ಯಸಭೆ ಉಪ ಸಭಾಪತಿಯಾಗಿದ್ದರು.
1962 ರಲ್ಲಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಿಂದ ಆಯ್ಕೆಯಾದ ಕೃಷ್ಣಮೂರ್ತಿ ರಾವ್, ಲೋಕಸಭೆ ಉಪ ಸ್ಪೀಕರ್ ಸ್ಥಾನಕ್ಕೆ ನೇಮಕ ಗೊಂಡರು. ಆ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗರೂಅವರೇ. ಕೃಷ್ಣಮೂರ್ತಿ ಅವರ ಬಳಿಕ ರಾಜ್ಯಸಭೆ ಉಪಸಭಾಪತಿ ಸ್ಥಾನ ಕನ್ನಡಿಗರೇ ಆದ ವಯಲೆಟ್ ಆಳ್ವಾ ಅವರಿಗೆ ಸಿಕ್ಕಿತ್ತು. ಯುಪಿಎ ಸರ್ಕಾರದ ಅವಧಿಯಲ್ಲಿ ರೆಹಮಾನ್ ಖಾನ್ ಅವರಿಗೆ ಈ ಹುದ್ದೆ ದೊರಕಿತ್ತು. ಒಟ್ಟಾರೆ ಮೂವರು ಕನ್ನಡಿಗರಷ್ಟೇ ಈ ಸ್ಥಾನ ಅಲಂಕರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.