ಬರಲ್ಲ ಅಂತಿದ್ದ ಜನರ ಬಳಿಯೇ ಠಾಣೆ ಕೊಂಡೊಯ್ದ ಸಿಂಹಿಣಿ!

Published : Jan 09, 2019, 12:40 PM IST
ಬರಲ್ಲ ಅಂತಿದ್ದ ಜನರ ಬಳಿಯೇ ಠಾಣೆ ಕೊಂಡೊಯ್ದ ಸಿಂಹಿಣಿ!

ಸಾರಾಂಶ

ಪೊಲೀಸ್ ಠಾಣೆ ಎಂದರೆ ಭಯ ಪಡುತ್ತಿದ್ದ ಗ್ರಾಮಗಳು| ಪೊಲೀಸರನ್ನು ಕಂಡರೆ ದೂರ ಓಡುತ್ತಿದ್ದ ಜನ| ಜನರ ವಿಶ್ವಾಸ ಗೆಲ್ಲಲು ಈ ಐಪಿಎಸ್ ಅಧಿಕಾರಿ ಮಾಡಿದ್ದೇನು?| ಪ್ರತಿ ಗ್ರಾಮಗಳಲ್ಲಿ ತಾತ್ಕಾಲಿಕ ಮಾದರಿ ಪೊಲೀಸ್ ಠಾಣೆ ನಿರ್ಮಾಣ| ಖುದ್ದು ಭೇಟಿ ನೀಡಿ ಜನರ ಕುಂದುಕೊರತೆ ಆಲಿಸುವ ಮಹಿಳಾ ಪೊಲೀಸ್ ಅಧಿಕಾರಿ| ಐಪಿಎಸ್ ಅಧಿಕಾರಿ ವಿನೂತಾ ಸಾಹು ಪ್ರಯತ್ನಕ್ಕೆ ಎಲ್ಲೆಡೆ ಶ್ಲಾಘನೆ

ಫೋಟೋ ಕೃಪೆ: ನವ್ ಭಾರತ್ ಟೈಮ್ಸ್

ಭಂಡಾರಾ(ಜ.09): ಪೊಲೀಸ್ ಠಾಣೆ ಮೆಟ್ಟಿಲು ಹತ್ತುವುದೆಂದರೆ ಜನರಿಗೆ ಇಂದಿಗೂ ಏನೋ ಒಂದು ತರಹದ ಹೆದರಿಕೆ. ಕೆಲವರಿಗೆ ಪೊಲೀಸ್ ಠಾಣೆಗೆ ಹೋಗಲು ಪ್ರತಿಷ್ಠೆ ಕೂಡ ಅಡ್ಡ ಬರುತ್ತದೆ.

ಆದರೆ ಪೊಲೀಸ್ ಠಾಣೆಗಳು, ಪೊಲೀಸರು ಇರುವುದು ಸಮಾಜದ ಶಿಸ್ತು ಕಾಪಾಡಲು. ಶಾಂತಿ, ಸುವ್ಯವಸ್ಥೆ ಮತ್ತು ಕಾನೂನಿನ ಪರಿಪಾಲನೆಗಾಗಿ ಪೊಲೀಸರು ಇರುವುದು. ಸಾಮಾನ್ಯ ಜನರ ರಕ್ಷಣೆಗಾಗಿ ಪೊಲೀಸರು ಹಗಲಿರುಳು ದುಡಿಯುತ್ತಾರೆ. ಇಂತಹವರಿಂದ ದೂರ ಇರುವುದು ಎಂದರೆ ವ್ಯವಸ್ಥೆಯನ್ನು ಅಣುಕಿಸಿದಂತೆಯೇ ಸರಿ.

ಅದರಂತೆ ಮಹಾರಾಷ್ಟ್ರದ ಗ್ರಾಮವೊಂದರ ಜನರಿಗೂ ಪೊಲೀಸರೆಂದರೆ ಎಲ್ಲಿಲ್ಲದ ಭಯ. ಗ್ರಾಮಸ್ಥರ ಮನಗೆಲ್ಲಲು ಎಷ್ಟೇ ಪ್ರಯತ್ನ ಮಾಡಿದರೂ ಪೊಲೀಸರನ್ನು ಕಂಡೊಡನೆ ಇವರು ದೂರ ಸರಿಯುತ್ತಿದ್ದರು. ಇದನ್ನರಿತ ಮಹಿಳಾ ಐಪಿಎಸ್ ಅಧಿಕಾರಿಯೋರ್ವರು ಜನರಲ್ಲಿರುವ ಪೊಲೀಸರ ಮೇಲಿರುವ ಭಯ ಹೋಗಲಾಡಿಸಲು ಕೈಗೊಂಡ ಕ್ರಮ ನಿಜಕ್ಕೂ ಶ್ಲಾಘನೀಯ.

ಮಹಾರಾಷ್ಟ್ರದ ಭಂಡಾರಾ ಜಿಲ್ಲೆಯ ಐಪಿಎಸ್ ಅಧಿಕಾರಿ ವಿನೂತಾ ಸಾಹೂ, ಪೊಲೀಸ್ ಠಾಣೆಗೆ ಬರಲು ಹೆದರುತ್ತಿದ್ದ ಜನರಿಗಾಗಿ ಪೊಲೀಸ್ ಠಾಣೆಯನ್ನೇ ಜನರ ಬಳಿ ಕೊಂಡೊಯ್ಯುವ ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

2017ರಿಂದ ಪ್ರತಿ ವರ್ಷ ಪ್ರತಿ ಗ್ರಾಮದಲ್ಲೂ ತಾತ್ಕಾಲಿಕವಾಗಿ ಮಾದರಿ ಪೊಲೀಸ್ ಠಾಣೆಗಳನ್ನು ನಿರ್ಮಿಸುತ್ತಾರೆ. ಗ್ರಾಮದ ಶಾಲೆ ಅಥವಾ ಪಂಚಾಯ್ತಿ ಕಟ್ಟಡಗಳಲ್ಲಿ ಕೆಲ ದಿನಗಳವರೆಗೆ ಮಾದರಿ ಪೊಲೀಸ್ ಠಾಣೆ ನಿರ್ಮಿಸಿ, ಜನ ತಮ್ಮ ಕುಂದು ಕೊರತೆಗಳನ್ನು ಹೇಳಿಕೊಳ್ಳುವಂತೆ ಮನವಿ ಮಾಡುತ್ತಾರೆ ವಿನೂತಾ ಸಾಹೂ.

ಇನ್ನು ವಿನೂತಾ ಸಾಹೂ ಅವರ ಈ ಪ್ರಯತ್ನದಿಂದಾಗಿ ಜನ ಕೂಡ ಪೊಲೀಸರೊಂದಿಗೆ ಸಹಕರಿಸುತ್ತಿದ್ದು, ಈ ತಾತ್ಕಾಲಿಕ ಮಾದರಿ ಪೊಲೀಸ್ ಠಾಣೆಗಳಿಗೆ ಭೇಟಿ ಕೊಟ್ಟು ತಮ್ಮ ಸಮಸ್ಯೆಗಳನ್ನು ಹೇಳಿ ಕೊಳ್ಳುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸವಣೂರು ಘಟನೆ ಕಾಂಗ್ರೆಸ್ ಓಲೈಕೆ ರಾಜಕಾರಣದ ಪ್ರತಿಬಿಂಬ, ರಾಜ್ಯದಲ್ಲಿ ಪೊಲೀಸರ ನಿಷ್ಕ್ರಿಯತೆ ಬಗ್ಗೆಯೂ ಸಂಸದ ಬೊಮ್ಮಾಯಿ ಕಿಡಿ
ಕಾಂಗ್ರೆಸ್ ರ‍್ಯಾಲಿಯಲ್ಲಿ ಹೊಸ ಗ್ಯಾರೆಂಟಿ ಘೋಷಿಸಿದ ರಾಹುಲ್ ಗಾಂಧಿ, ಈ ಭಾರಿಯ ಭರವಸೆ ಏನು?