ಚಿತ್ರ ಕಲಾವಿದ ಭೀಮರಾವ್​ ಮುರಗೋಡ್​​​​ ನಿಧನ

Published : Oct 05, 2018, 10:06 PM ISTUpdated : Oct 05, 2018, 10:13 PM IST
ಚಿತ್ರ ಕಲಾವಿದ ಭೀಮರಾವ್​ ಮುರಗೋಡ್​​​​ ನಿಧನ

ಸಾರಾಂಶ

ಕಲಾಲೋಕದ ಒಂದು ಕೊಂಡಿ ಕಳಚಿದೆ. ಮಹಾನ್ ನಾಯಕರನ್ನು ತಮ್ಮ ಕಲಾಕೃತಿಗಳ ಮೂಲಕ ಹಸಿರಾಗಿರಿಸಿದ್ದ ಕಲಾವಿದ  ಭೀಮರಾವ್​ ಮುರಗೋಡ್​​​​[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಬೆಂಗಳೂರು(ಅ.5] ಭಾರತದ ಬಹುತೇಕ ಪ್ರಧಾನಮಂತ್ರಿ ಹಾಗೂ ರಾಷ್ಟ್ರಪತಿಗಳನ್ನು ತಮ್ಮ ಮುಂದೆ ಕೂರಿಸಿಕೊಂಡು ಅವರ ಚಿತ್ರ ರಚಿಸಿದ್ದ ಕಲಾವಿದ ಭೀಮರಾವ್​ ಮುರಗೋಡ್​​​​[75] ವಯೋಸಹಜ ಅನಾರೋಗ್ಯದಿಂದ ನಿಧನರಾಗಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿದ್ದ ಮುರಗೋಡ್ ಅವರಿಗೆ ರಾಜ್ಯ ಪ್ರಶಸ್ತಿ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿದ್ದವು. ಭೀಮರಾವ್​ ಮುರಗೋಡ್​ ಅವರಿಗೆ  ಪುತ್ರರಾದ ಸ್ವರೂಪ್ ಮುರಗೋಡ್, ಸಾಮ್ರಾಟ್ ಗೌತಮ್ ಹಾಗೂ ಪುತ್ರಿ ಮೊನಾಲಿಸಾ ವಿನಯ್ ಮತ್ತು ಪತ್ನಿ ಶಾಲಿನಿ ಮುರಗೋಡ್ ಇದ್ದಾರೆ. ಅಂತ್ಯಕ್ರಿಯೆ ಹುಟ್ಟೂರು ಗೋಕಾಕ್​​ನಲ್ಲಿ ನಡೆಯಲಿದೆ.

ಇತ್ತೀಚೆಗಷ್ಟೇ ಬೆಂಗಳೂರಿಗೆ ಬಂದು ನೆಲೆಸಿದ್ದ ಅವರು, ಸುಮಾರು 4 ದಶಕಗಳ ಕಾಲ ನವದೆಹಲಿಯಲ್ಲಿ ಇದ್ದರು. 2000ರಲ್ಲಿ ಅಂದಿನ ಅಮೆರಿಕ ಅಧ್ಯಕ್ಷ ಬಿಲ್ ಕ್ಲಿಂಟನ್​ ಭಾರತಕ್ಕೆ ಭೇಟಿ ನೀಡಿದ್ದಾಗ ಅವರಿಗಾಗಿಯೇ, ಅವರದ್ದೇ ಕಲಾಕೃತಿ ರಚಿಸಿದ್ದರು. 1978ರಲ್ಲಿ ಅಮೆರಿಕಾ ಅಧ್ಯಕ್ಷ ಜಿಮ್ಮಿ ಕಾರ್ಟರ್ ಭಾರತಕ್ಕೆ ಭೇಟಿ ನೀಡಿದ್ದಾಗ ಅವರ ಕಲಾಕೃತಿಯನ್ನು ಬಿಡಿಸಿದ್ದರು.

ಮದರ್ ಥೆರೇಸಾ, ಪೋಪ್ ಜಾನ್ ಪೌಲ್-2, ಇಂದಿರಾ ಗಾಂಧಿ, ಪಂಡಿತ್ ರವಿಶಂಕರ್, ರಾಜಾ ರಾಮಣ್ಣ, ಎಂ.ಎಫ್ ಹುಸೇನ್ ಸೇರಿದಂತೆ ಅನೇಕ ಗಣ್ಯರ ಕಲಾಕೃತಿ ರಚಿಸಿ ಜನಮನ್ನಣೆಗೆ ಪಾತ್ರವಾಗಿದ್ದರು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!
ಪ್ರಧಾನಿ ಮೋದಿ ಸಮಾಧಿ ಉದ್ಘೋಷದ ವಿರುದ್ಧ ಸಂಸತ್ತಲ್ಲಿ ಗದ್ದಲ: ಕ್ಷಮೆಗೆ ಆಗ್ರಹ