[ಸುಳ್ ಸುದ್ದಿ]  ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ಕೊಂಡ ರಾಹುಲ್ ಗಾಂಧಿ?

Published : Feb 25, 2018, 03:57 PM ISTUpdated : Apr 11, 2018, 01:07 PM IST
[ಸುಳ್ ಸುದ್ದಿ]  ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕ ಕೊಂಡ ರಾಹುಲ್ ಗಾಂಧಿ?

ಸಾರಾಂಶ

ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಬಸವಣ್ಣನವರ ವಚನ ಹೇಳಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಕನ್ನಡ ಕಲಿಯುವ ಸಲುವಾಗಿ ದಿನದಲ್ಲಿ ಒಂದು ಗಂಟೆಯನ್ನು ರಾಹುಲ್ ಮೀಸಲಿಡಲಿದ್ದಾರೆ.

ರಾಹುಲ್ ಗಾಂಧಿ ಅವರು ಚುನಾವಣಾ ಪ್ರಚಾರದ ವೇಳೆ ಬಸವಣ್ಣನವರ ವಚನ ಹೇಳಲು ಹೋಗಿ ನಗೆಪಾಟಲಿಗೀಡಾಗಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಮುನ್ನೆಚ್ಚರಿಕೆ ವಹಿಸಿರುವ ರಾಹುಲ್, ‘30 ದಿನಗಳಲ್ಲಿ ಕನ್ನಡ ಕಲಿಯಿರಿ’ ಪುಸ್ತಕವನ್ನು ಖರೀದಿಸಿದ್ದಾರೆ.

ದಿನವೂ ಒಂದೊಂದು ಅಧ್ಯಾಯವನ್ನು ಕರಗತ ಮಾಡಿಕೊಂಡು ಮುಂದಿನ ತಿಂಗಳ ವೇಳೆ ನಿರರ್ಗಳವಾಗಿ ಮಾತನಾಡುವುದಾಗಿ ಹೇಳಿದ್ದಾರೆ. ಕನ್ನಡ ಕಲಿಯುವ ಸಲುವಾಗಿ ದಿನದಲ್ಲಿ ಒಂದು ಗಂಟೆಯನ್ನು ರಾಹುಲ್ ಮೀಸಲಿಡಲಿದ್ದಾರೆ. ಇದಕ್ಕಾಗಿ ಕನ್ನಡ ಶಿಕ್ಷಕರೊಬ್ಬರನ್ನು ದೆಹಲಿಗೂ ಕರೆದೊಯ್ಯಲಿದ್ದಾರೆ.

ಮುಂದಿನ ಬಾರಿ ಭಾಷಣದಲ್ಲಿ ಕನ್ನಡದ ಪಾಂಡಿತ್ಯ ಪ್ರದರ್ಶಿಸಲು ಶ್ರೀಗಂಧದ ಕೊರಡು ತೇಯ್ದು ತೇಯ್ದು ಕೊರಡೆರಡಾಯಿತು ಎಂದು ಟಂಗ್‌ಟ್ವಿಸ್ಟರ್ ಕೂಡ ಹೇಳಲಿದ್ದಾರೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. [ಸುಳ್ ಸುದ್ದಿ ವಾರ್ತೆ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ನಾಳೆ ಬೆಂಗಳೂರಿನ ಹಲೆವೆಡೆ ಪವರ್ ಕಟ್, ಸಾರ್ವಜನಿಕರಿಗೆ ಮಹತ್ವದ ಸೂಚನೆ
ಅನೇಕಲ್‌ನಲ್ಲಿ ಭೀಕರ ಅಪಘಾತ; 20 ವಾಹನಕ್ಕೆ ಕಂಟೈನರ್ ಡಿಕ್ಕಿ, 2ಕ್ಕೂ ಹೆಚ್ಚು ಸಾವು, ಹಲವರು ಗಂಭೀರ