
ಬೆಂಗಳೂರು (ಜೂ. 03): ಇಂಧನ ಖಾತೆ ಬಿಟ್ಟುಕೊಟ್ಟ ಡಿ.ಕೆ. ಶಿವಕುಮಾರ್ಗೆ ಎಚ್.ಡಿ.ರೇವಣ್ಣ ವಿಶೇಷ ತಾಯತವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಖ್ಯಾತ ಜ್ಯೋತಿಷಿಯೊಬ್ಬರು ಸಿದ್ಧಪಡಿಸಿರುವ ಈ ತಾಯತ ಐಟಿ ಹಾಗೂ ಸಿಬಿಐ ದಾಳಿಯಿಂದ ರಕ್ಷಣೆ ನೀಡಲಿದೆ.
ತಾಯತ ಧರಿಸಿಕೊಂಡರೆ ಸಿಬಿಐ ದಾಳಿಯ ಬಗ್ಗೆ ಮುನ್ಸೂಚನೆ ರವಾನಿಸಲಿದೆ. ಐಟಿ ಅಧಿಕಾರಿಗಳು ಕರ್ನಾಟಕಕ್ಕೆ ಕಾಲಿಡುತ್ತಿದ್ದಂತೆ ತಾಯತ ಕಂಪಿಸಲು ಆರಂಭವಾಗಲಿದೆ. ತಾಯತವನ್ನು ಕೈಯಲ್ಲಿ ಹಿಡಿದುಕೊಂಡರೆ ಐಟಿ ಅಧಿಕಾರಿಗಳು ಎಷ್ಟು ಗಂಟೆಗೆ ಬರಲಿದ್ದಾರೆ? ಯಾವ ಕಡೆಗಳಲ್ಲಿ ದಾಳಿ ಮಾಡಲಿದ್ದಾರೆ? ಯಾವ್ಯಾವ ಬ್ಯಾಂಕ್ ಖಾತೆಯ ವಿವರ ಕೇಳಲಿದ್ದಾರೆ? ಅದಕ್ಕೆ ಹೇಗೆ ಉತ್ತರಿಸಬೇಕು ಎನ್ನುವ ಸುಳಿವು ದೊರೆಯಲಿದೆ. ತಾಯತ ಕೈಯಲ್ಲಿ ಇರುವ ತನಕವೂ ಡಿಕೆಶಿಗೆ ಯಾವುದೇ ತೊಂದರೆ ಇಲ್ಲ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.