
ಚಂಡೀಘಡ(ಸೆ.18): ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ತೆರಿಗೆ ವಂಚಕರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗಳು ಹೆಚ್ಚಾಗುತ್ತಿವೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡ ಕೆಲವು ಮೋಸಗಾರರು ನಕಲಿ ಅಧಿಕಾರಿಗಳ ವೇಷದಲ್ಲಿ ಸೋಗು ಹಾಕಿಕೊಂಡು ದಾಳಿಯಿಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೇ ರೀತಿಯ ಪ್ರಕರಣ ಹರ್ಯಾಣದ ಮಾಳವೀಯ ನಗರದಲ್ಲಿ ಭಾನುವಾರ ನಡೆದಿದೆ. ಆದರೆ ಗ್ರಹಚಾರ ಕೆಟ್ಟಿತ್ತು ಏನೋ ವಂಚಿಸುವ ಬದಲು ಮನೆಯವರ ಕೈಗೆ ಸಿಕ್ಕಿ ಹಣ್ಣುಗಾಯಿ ನೀರುಗಾಯಿಯಾಗಿದ್ದಾರೆ. ರಮೇಶ್ ಚಾಂದ್ ಎಂಬ ಉದ್ಯಮಿಯ ಮನೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಕಾರಿನಲ್ಲಿ ಬಂದ 6 ಮಂದಿ ಮನೆಮಂದಿಯ ಮೊಬೈಲ್'ಅನ್ನು ಕಸಿದುಕೊಂಡು ನೀವು 20 ಕೋಟಿಗೂ ಹೆಚ್ಚು ತೆರಿಗೆ ಪಾವತಿಸಿಲ್ಲ ಎಂದು ಮನೆಯನ್ನು ಶೋಧಿಸಲು ಆರಂಭಿಸಿದೆ.
ಆದರೆ ಉದ್ಯಮಿಯ ಪುತ್ರಿಗೆ ಇವರ ನಡೆಯ ಬಗ್ಗೆ ಅನುಮಾನ ಬಂದು ಗುರುತಿನ ಚೀಟಿಗಳನ್ನು ಕೇಳಿದ್ದಾಳೆ. ಅವು ನಕಲಿಯಾಗಿದ್ದವು. ಕೋಪಗೊಂಡ ಮನೆಯಮಂದಿ ನಕಲಿ ಅಧಿಕಾರಿಗಳಿಗೆ ಹಿಗ್ಗಾಮಗ್ಗಾ ಬಾರಿಸಿದ್ದಾರೆ. ಪಾಪ ವಿಡಿಯೋದಲ್ಲಿ ಒದೆ ತಿನ್ನುವ ಇವರ ನರಳಾಟ ನೋಡಲಾಗುತ್ತಿರಲಿಲ್ಲ. ಸ್ಥಳೀಯ ಪೊಲೀಸರು ಆಗಮಿಸಿ ಬಂಧಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.