
ಬೆಂಗಳೂರು (ಫೆ.09): ಮಕ್ಕಳಿಗೆ ಯಂತ್ರ ಹಾಕ್ತಿನಿ ಅಂತ ಹೇಳಿದ ನಕಲಿ ಜ್ಯೋತಿಷಿಯೊಬ್ಬ ಬ್ರೈನ್ ವಾಶ್ ಮಾಡಿ ವಿಷ ಸೇವಿಸುವಂತೆ ಮಾಡಿರುವ ಘಟನೆ ಕೊಟ್ಟಿಗೆ ಪಾಳ್ಯದಲ್ಲಿ ನಡೆದಿದೆ.
ಕೊಟ್ಟಿಗೆ ಪಾಳ್ಯದ ನಿವಾಸಿ ಕುಮಾರ್ ಹಾಗೂ ರೇಷ್ಮಾ ದಂಪತಿ ಜ್ಯೋತಿಷಿಯಿಂದ ಮೋಸ ಹೋದವರು. ದಂಪತಿಗಳನ್ನು ಪರಿಚಯ ಮಾಡಿಕೊಂಡ ಜ್ಯೋತಿಷಿ ಅವರನ್ನು ವಶೀಕರಣ ಮಾಡಿ ಅವರ ಬಳಿಯಿದ್ದ ಹಣ, ಚಿನ್ನಾಭರಣವನ್ನ ದೋಚಿದ್ದಾನೆ. ಇದು ಗೊತ್ತಾಗ ಬಾರದು ಎಂದು ವಿಷ ಸೇವಿಸುವಂತೆ ಹೇಳಿದ್ದಾನೆ. ವಶೀಕರಣಕ್ಕೆ ಒಳಗಾದ ದಂಪತಿ ಜ್ಯೋತಿಷಿ ಮಾತನ್ನ ನಂಬಿ ವಿಷ ಸೇವಿಸಿದ್ದಾರೆ. ಈಗ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಸಂಬಂಧಿಗಳು ನಕಲಿ ಜ್ಯೋತಿಷಿಗೆ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.