Fact Check: ಕಾಶ್ಮೀರದ ಕಾಡುನಾಶ ಮಾಡಿ, ಪೀಠೋಪಕರಣ ಮಾಡಿಸಿದ್ರಾ ಓಮರ್‌ ಅಬ್ದುಲ್ಲಾ?

Published : Sep 20, 2019, 12:31 PM IST
Fact Check: ಕಾಶ್ಮೀರದ ಕಾಡುನಾಶ ಮಾಡಿ, ಪೀಠೋಪಕರಣ ಮಾಡಿಸಿದ್ರಾ ಓಮರ್‌ ಅಬ್ದುಲ್ಲಾ?

ಸಾರಾಂಶ

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಕಾಶ್ಮೀರದಲ್ಲಿದ್ದ ಕಾಡನ್ನೆಲ್ಲಾ ಸರ್ವನಾಶ ಮಾಡಿ, ತಮ್ಮ ಮನೆಗೆ ವೈಭವೋಪೇತ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಕಾಶ್ಮೀರದಲ್ಲಿದ್ದ ಕಾಡನ್ನೆಲ್ಲಾ ಸರ್ವನಾಶ ಮಾಡಿ, ತಮ್ಮ ಮನೆಗೆ ವೈಭವೋಪೇತ ಪೀಠೋಪಕರಣಗಳನ್ನು ಮಾಡಿಸಿಕೊಂಡಿದ್ದಾರೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ತರಹೇವಾರಿ ಶೈಲಿಯ ಮರದ ಡೈನಿಂಗ್‌ ಟೇಬಲ್‌, ಕಪಾಟು ಮತ್ತಿತರ ಫೋಟೋಗಳನ್ನು ಪೋಸ್ಟ್‌ ಮಾಡಲಾಗಿದೆ.

ಮೊದಲಿಗೆ ಫೇಸ್‌ಬುಕ್‌ನಲ್ಲಿ ಈ ಫೋಟೋಗಳನ್ನು ಪೋಸ್ಟ್‌ ಮಾಡಿ, ‘ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಓಮರ್‌ ಅಬ್ದುಲ್ಲಾ ಖಾನ್‌ ಅವರ ನಿವಾಸವಿದು. ಅಕ್ಷರಶಃ ಕಾಶ್ಮೀರದ ಕಾಡು ಪೂರ್ತಿ ಕಡಿದು ಮನೆಯನ್ನು ಅಲಂಕರಿಸಿಕೊಂಡಿದ್ದಾರೆ’ ಎನ್ನಲಾಗಿದೆ. ವಾಟ್ಸ್‌ಆ್ಯಪ್‌ನಲ್ಲೂ ಇದು ವೈರಲ್‌ ಆಗುತ್ತಿದೆ. ಅಲ್ಲದೆ ಓಮರ್‌ ಅಬ್ದುಲ್ಲಾ ಬಂಗ್ಲೋ ಗ್ಯಾನ್ಸ್‌ ಎಂಬ ಬ್ಲಾಗ್‌ನಲ್ಲೂ ಇವೇ ಫೋಟೋಗಳಿವೆ.

ಆದರೆ ನಿಜಕ್ಕೂ ಇವೆಲ್ಲಾ ಕಣಿವೆ ರಾಜ್ಯದ ಮಾಜಿ ಮುಖ್ಯಮಂತ್ರಿ ಮನೆಯವೇ ಎಂದು ಬೂಮ್‌ಲೈವ್‌ ಪರಿಶೀಲಿಸಿದಾಗ ಇದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಪ್ರಪಂಚದ ಅತ್ಯುತ್ತಮ ವಿನ್ಯಾಸದ ಪೀಠೋಪಕರಣಗಳನ್ನು ಎಂದು ಹಲವಾರು ವೆಬ್‌ಸೈಟ್‌ಗಳಲ್ಲಿ ಈ ರೀತಿಯ ಫೋಟೋಗಳಿವೆ.

ಇದರಲ್ಲಿ ಕೆಲವು ಅಮೆರಿಕ ಮೂಲದ ವಿನ್ಯಾಸಗಳಾಗಿವೆ. ಹೀಗೆ ಲಭ್ಯವಿರುವ ಅತ್ಯುತ್ತಮ ಪೀಠೋಪಕರಣಗಳ ವಿನ್ಯಾಸದ ಫೋಟೋಗಳನ್ನು ಬಳಸಿ ಅವು ಓಮರ್‌ ಅಬ್ದುಲ್ಲಾ ನಿವಾಸದ್ದು ಎಂದು ಸುಳ್ಳು ಸುದ್ದಿ ಹರಡಲಾಗುತ್ತಿದೆ.

 

ಜಮ್ಮು-ಕಾಶ್ಮೀರಕ್ಕೆ ಸಂವಿಧಾನದ ಕಲಂ-370 ಅಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಆಗಸ್ಟ್‌ 5ರಂದು ಕೇಂದ್ರ ಸರ್ಕಾರ ನಿಷ್ಕಿ್ರಯ ಮಾಡಿದೆ. ಅಲ್ಲಿನ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಓಮರ್‌ ಅಬ್ದುಲ್ಲಾ ಸೇರಿದಂತೆ ಹಲವು ಪ್ರಮುಖ ರಾಜಕಾರಣಿಗಳನ್ನು ಕೇಂದ್ರ ಸರ್ಕಾರ ನ್ಯಾಯಾಂಗ ಬಂಧನದಲ್ಲಿಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ
ಮಧುಗಿರಿ: ಕದ್ದ ಎಟಿಎಂ ಭಾರ ಇದೆ ಎಂದು ರಸ್ತೆಯಲ್ಲೇ ಬಿಟ್ಟು ಹೋದರು