Fact Check: ರಾಮಾಯಣದ ಜಟಾಯು ಪಕ್ಷಿ ಕೇರಳದಲ್ಲಿ ಪತ್ತೆ?

Published : Aug 02, 2019, 10:55 AM IST
Fact Check: ರಾಮಾಯಣದ ಜಟಾಯು ಪಕ್ಷಿ ಕೇರಳದಲ್ಲಿ ಪತ್ತೆ?

ಸಾರಾಂಶ

ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಯು ಕೇರಳದಲ್ಲಿ ಪ್ರತ್ಯಕ್ಷವಾಗಿದೆ ಎಂಬ ಸಂದೇಶವೊಂದರ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.  ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

ರಾಮಾಯಣದಲ್ಲಿ ಉಲ್ಲೇಖವಾಗಿರುವ ಜಟಾಯು ಪಕ್ಷಿಯು ಕೇರಳದಲ್ಲಿ ಪ್ರತ್ಯಕ್ಷವಾಗಿದೆ ಎಂಬ ಸಂದೇಶವೊಂದರ ಜೊತೆಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ವಿಡಿಯೋದಲ್ಲಿ ದೈತ್ಯ ಪಕ್ಷಿಯೊಂದು ಅಗಲವಾದ ರೆಕ್ಕೆಗಳನ್ನು ಬಿಚ್ಚಿ ಒಂದು ಸುತ್ತು ತಿರುಗಿ ಹಾರಿಹೋಗುವ ದೃಶ್ಯವಿದೆ.

ಸೇಂತಿಲ್‌ ಅಂದವನ್‌ ಎಂಬುವರು ಈ ವಿಡಿಯೋವನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಜುಲೈ 27ರಂದು ಪೋಸ್ಟ್‌ ಮಾಡಿರುವ ಈ ವಿಡಿಯೋವು 370 ಬಾರಿ ರೀಟ್ವೀಟ್‌ ಆಗಿದೆ. ಕೇವಲ ಟ್ವೀಟರ್‌ನಲ್ಲಿ ಮಾತ್ರವಲ್ಲದೆ ಫೇಸ್‌ಬುಕ್‌ನಲ್ಲಿಯೂ ಈ ವಿಡಿಯೋ ವೈರಲ್‌ ಆಗಿದೆ.

 

ರಾಮಾಯಣದಲ್ಲಿ ಸೀತೆಯನ್ನು ರಾವಣನು ಅಪಹರಿಸುವ ಸಂದರ್ಭದಲ್ಲಿ ಜಟಾಯುವು ರಾವಣನಿಗೆ ತಡೆಯೊಡ್ಡಿತು. ಆಗ ರಾವಣನು ಅದರ ರೆಕ್ಕೆಯನ್ನು ಕತ್ತರಿಸಿ ಮುಂದಕ್ಕೆ ಸಾಗಿದನು ಎಂದು ಉಲ್ಲೇಖವಾಗಿದೆ. ಅದು ಕೇರಳದ ಕೊಲ್ಲಂ ಜಿಲ್ಲೆಯ ಚದಾಯಮಂಗಳಂನಲ್ಲಿ ಕೊನೆಯುಸಿರೆಳೆಯಿತು ಎಂದು ನಂಬಲಾಗಿದೆ. ವೈರಲ್‌ ಆಗಿರುವ ಸಂದೇಶದಲ್ಲಿ ಈ ಸ್ಥಳದಲ್ಲಿಯೇ ಜಟಾಯು ಪ್ರತ್ಯಕ್ಷವಾಯಿತು ಎಂದು ಹೇಳಲಾಗಿದೆ.

ಆದರೆ ನಿಜಕ್ಕೂ ಇದು ಪುರಾಣದಲ್ಲಿ ಉಲ್ಲೇಖವಾಗಿರುವ ಜಟಾಯುವೇ ಎಂದು ಪರಿಶೀಲಿಸಿದಾಗ ಇದು ಕಾಂಡೋರ್‌ ಪಕ್ಷಿ ಎಂದು ತಿಳಿದುಬಂದಿದೆ. ಕಾಂಡೋರ್‌ ರಣಹದ್ದುವಿನ ಒಂದು ವಿಧ. ದಕ್ಷಿಣ ಅಮೆರಿಕದಲ್ಲಿ ಇದು ಕಂಡು ಬರುತ್ತದೆ. ಇವುಗಳ ರೆಕ್ಕೆಯು 3.2 ಮೀಟರ್‌ ಉದ್ದವಿರುತ್ತದೆ. ಅಲ್ಲದೆ ವೈರಲ್‌ ಆಗಿರುವ ವಿಡಿಯೋವು ಹೊಸತಲ್ಲ, 2014ರದ್ದು. ಈ ವಿಡಿಯೋದಲ್ಲಿರುವ ಕಾಂಡೋರ್‌ ಹೆಸರು ಸಯಾನಿ. ವಿಷ ಆಹಾರ ಸೇವಿಸಿದ ರೀತಿಯಲ್ಲಿ ಅರ್ಜೆಂಟೈನಾದಲ್ಲಿ ಪತ್ತೆಯಾಗಿತ್ತು. ನಂತರ ಅದನ್ನು ರಕ್ಷಿಸಿ ಅರಣ್ಯಕ್ಕೆ ಬಿಡಲಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ