ನೋಟ್ ಬ್ಯಾನ್ ಬಳಿಕದ ಬಹುನಿರೀಕ್ಷಿತ ಬಜೆಟ್'ನಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?

Published : Feb 01, 2017, 02:57 AM ISTUpdated : Apr 11, 2018, 01:06 PM IST
ನೋಟ್ ಬ್ಯಾನ್ ಬಳಿಕದ ಬಹುನಿರೀಕ್ಷಿತ ಬಜೆಟ್'ನಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಸಿಗುತ್ತಾ?

ಸಾರಾಂಶ

ನೋಟ್​ಬ್ಯಾನ್ ಬಳಿಕ ಈ ಬಾರಿಯ ಬಜೆಟ್, ಈ ಹಿಂದಿನ ಎಲ್ಲ ಬಜೆಟ್​ಗಳಿಗಿಂತ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಇದೇ ಕಾರಣಕ್ಕೆ. ಈ ನೋಟ್​'ಬ್ಯಾನ್​ ನಂತರದ ಬಜೆಟ್, ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ.

ನವದೆಹಲಿ(ಫೆ.01): ನೋಟ್​ಬ್ಯಾನ್ ಬಳಿಕ ಈ ಬಾರಿಯ ಬಜೆಟ್, ಈ ಹಿಂದಿನ ಎಲ್ಲ ಬಜೆಟ್​ಗಳಿಗಿಂತ ಹೆಚ್ಚು ನಿರೀಕ್ಷೆ ಮೂಡಿಸಿರುವುದು ಇದೇ ಕಾರಣಕ್ಕೆ. ಈ ನೋಟ್​'ಬ್ಯಾನ್​ ನಂತರದ ಬಜೆಟ್, ಇದೇ ಕಾರಣಕ್ಕೆ ಕುತೂಹಲ ಮೂಡಿಸಿದೆ.

ನವೆಂಬರ್ 8ರಂದು ಪ್ರಧಾನಿ ನರೇಂದ್ರ ಮೋದಿ ಇಂಥಾದ್ದೊಂದು ಘೋಷಣೆ ಮೊಳಗಿಸಿದ ನಂತರ, ದೇಶದ ಅರ್ಥವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಪರ-ವಿರೋಧ ಚರ್ಚೆಯಲ್ಲಿ ಮೋದಿಯ ಹೆಜ್ಜೆಗೆ ಜನಬೆಂಬಲವಂತೂ ಸಿಕ್ಕಿದೆ. ಈಗ ಜನ ಆ ನೋಟ್​'ಬ್ಯಾನ್​'ನ ಫಲಿತಾಂಶವನ್ನು ಎದುರು ನೋಡುತ್ತಿದ್ದಾರೆ ಈ ಬಜೆಟ್​ನಲ್ಲಿ.

ಆರ್​'ಬಿಐಗೆ ಬಂದ ಒಟ್ಟು ಹಣ ಎಷ್ಟು..?

ಬ್ಯಾಂಕ್​ಗೆ ಬಂದ ಹಣವನ್ನು ಏನು ಮಾಡ್ತಾರೆ..?

ದೇಶದಲ್ಲಿ ಸಿಕ್ಕ ಒಟ್ಟು ಕಪ್ಪುಹಣ ಎಷ್ಟು..?

ಕಪ್ಪುಹಣ ಹೊಂದಿದ್ದವರಿಗೆ ಏನು ಶಿಕ್ಷೆ..?

ಇಂಥ ಕಥೆಗಳೂ ಇವೆ..!

ಇದರ ಮಧ್ಯೆ ಜನ್​ಧನ್ ಖಾತೆಗೆ ಮೋದಿ ಹಣ ಹಂಚಿಬಿಡ್ತಾರಂತೆ, ರೈತರಿಗೆಲ್ಲ ಉಚಿತವಾಗಿ ಕೃಷಿ ಸಾಲ ಕೊಡ್ತಾರಂತೆ ಅನ್ನೋ ಕಥೆಗಳೂ ಇವೆ. ಆದರೆ, ಇಂಥ ಗಾಳಿಮಾತುಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ನೋಟ್​​ಬ್ಯಾನ್ ನಂತರ ಚಿಗುರಿಕೊಂಡಿರುವುದು ಆನ್​ಲೈನ್ ಬ್ಯುಸಿನೆಸ್. ಬ್ಯಾಂಕುಗಳಲ್ಲಿ ನಗದು ಹಣವೇ ಸಿಗುತ್ತಿಲ್ಲ. ಹೀಗಿರುವಾಗ ಡಿಜಿಟಲ್ ವಹಿವಾಟಿಗೆ ಒಂದಿಷ್ಟು ಉತ್ತೇಜನ ಸಿಗುವ ಮಾತುಗಳಂತೂ ಇವೆ.

ನೋಟ್​ಬ್ಯಾನ್ ಎಫೆಕ್ಟ್ ಏನಾಗಬಹುದು?

ಇದಕ್ಕೆ ಕಡಿಮೆ ಬೆಲೆಯ ಸ್ಮಾರ್ಟ್​ಫೋನ್​ಗಳಿಗೆ ತೆರಿಗೆ ವಿನಾಯಿತಿ ಕೊಡುವುದು, ಇಂಟರ್​ನೆಟ್ ಸೇವೆಯನ್ನು ದೊಡ್ಡಮಟ್ಟದಲ್ಲಿ ವಿಸ್ತರಿಸುವುದು, ಸ್ಕೂಲು, ಆಸ್ಪತ್ರೆ, ರೈಲು, ವಿಮಾನ ಟಿಕೆಟ್​ಗಳನ್ನು ಆನ್​ಲೈನ್​ನಲ್ಲಿ ಪಡೆಯುವವರಿಗೆ ತೆರಿಗೆ ವಿನಾಯಿತಿ ಮತ್ತು ಸೇವೆಯಲ್ಲಿ ರಿಯಾಯಿತಿ ಘೋಷಿಸಬಹುದು ಇಂತಹ ಯೋಜನೆಗಳೇನೋ ಇವೆ.
ವ್ಯಾಪಾರಿಗಳಿಗೆ ಏನು..?

ಇನ್ನು ನೋಟ್​ಬ್ಯಾನ್'​ನಲ್ಲಿ ಹೆಚ್ಚು ನಲುಗಿದ್ದು ವ್ಯಾಪಾರಿಗಳು. ಇವರ ಅನುಕೂಲಕ್ಕಾಗಿ ಪಿಎಸ್​ಒ ಅಂದರೆ, ಕಾರ್ಡ್​ ಸ್ವೈಪ್ ಯಂತ್ರಗಳ ಬೆಲೆ ಕಡಿಮೆಯಾಗಬಹುದು. ವ್ಯಾಪಾರಿಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕೊಡುವ ಸಾಧ್ಯತೆಗಳೂ ಇವೆ. ಸರ್ಕಾರಿ ಌಪ್​ ಬಳಕೆದಾರರಿಗೆ ಕ್ಯಾಶ್

​ಬ್ಯಾಕ್ ಸ್ಕೀಂ ತರುವ ಮೂಲಕ ಡಿಜಿಟಲ್ ಬ್ಯಾಂಕಿಂಗ್​ಗೆ ಉತ್ತೇಜನ ಕೊಡಬಹುದು. ಜೊತೆಯಲ್ಲಿ ಸೇಲ್ ಟ್ಯಾಕ್ಸ್​ ಇಳಿಸುವ ಸಾಧ್ಯತೆಯೂ ಇದೆ.

ಈ ಎಲ್ಲದರ ನಡುವೆಯೂ ಸರ್ಕಾರದ ಬಹುದೊಡ್ಡ ಜವಾಬ್ದಾರಿ, ಡಿಜಿಟಲ್ ಸೆಕ್ಯುರಿಟಿ. ಆನ್​ಲೈನ್ ವಹಿವಾಟಿಗೆ ಉತ್ತೇಜನ ಕೊಡುವಾಗ, ಆನ್​ಲೈನ್ ಮಾಹಿತಿಯೂ ಅಷ್ಟೇ ಭದ್ರವಾಗಿರಬೇಕು. ಈ ಬಗ್ಗೆ ಸರ್ಕಾರ ರಚನಾತ್ಮಕ ಹೆಜ್ಜೆ ಇಡಲೇಬೇಕು. ಏಕೆಂದರೆ, ಡಿಜಿಟಲ್ ಆಗಿ ಎನ್ನುತ್ತಿರುವ ಸರ್ಕಾರ, ಮೊದಲು ತಾನು ಡಿಜಿಟಲ್ ಆಗಬೇಕು.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆರ್‌ಒ ಪ್ಲ್ಯಾಂಟ್‌ಗಳ ನಿರ್ವಹಣೆಯೇ ಸರ್ಕಾರಕ್ಕೆ ಸವಾಲು: ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?
ತಪ್ಪು ಮಾಹಿತಿ ಕೊಟ್ಟಿದ್ರೆ ಹೆಬ್ಬಾಳ್ಕರ್‌ ವಿರುದ್ಧ ಹಕ್ಯುಚ್ಯುತಿ ಮಂಡಿಸಿ: ಡಿ.ಕೆ.ಶಿವಕುಮಾರ್‌