'ಹಳೆ ನೋಟುಗಳ ಮೂಲಕ ಸಾಲ ಮರು ಪಾವತಿ ಬೇಡ': ಕೇಂದ್ರದ ನಿರ್ಧಾರದಿಂದ ಸಹಕಾರಿ ಬ್ಯಾಂಕ್'ಗಳು ಕಂಗಾಲು

Published : Nov 16, 2016, 03:40 AM ISTUpdated : Apr 11, 2018, 12:51 PM IST
'ಹಳೆ ನೋಟುಗಳ ಮೂಲಕ ಸಾಲ ಮರು ಪಾವತಿ ಬೇಡ': ಕೇಂದ್ರದ ನಿರ್ಧಾರದಿಂದ ಸಹಕಾರಿ ಬ್ಯಾಂಕ್'ಗಳು ಕಂಗಾಲು

ಸಾರಾಂಶ

500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'​ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್​ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.

ನವದೆಹಲಿ(ನ.16): 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'​ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್​ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.

ನವೆಂಬರ್ 24ರವರೆಗೂ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ರೈಲ್ವೇ, ಸಾರಿಗೆ ಇಲ್ಲೆಲ್ಲ ಹಳೇ ನೋಡು ಪಡೆಯಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ರೈತರ ಆಧಾರಿತ ಸಹಕಾರಿ ಬ್ಯಾಂಕ್​'ಗಳಲ್ಲಿ ಮಾತ್ರ ಈ ನೋಟು ತೆಗೆದುಕೊಳ್ಳುವಂತಿಲ್ಲ. ಸಹಕಾರಿ ಬ್ಯಾಂಕ್​'ಗಳಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್​ ಮಾಡಿಕೊಳ್ಳಬಾರದು ಮತ್ತು ಹಳೆಯ ನೋಟುಗಳ ಮೂಲಕ ಸಾಲ ಮರುಪಾವತಿ ಮಾಡಿಸಿಕೊಳ್ಳಬಾರದು ಎಂದು ರಿಸರ್ವ್​ ಬ್ಯಾಂಕ್​ ಸುತ್ತೋಲೆ ಹೊರಡಿಸಿದ್ದು, ರೈತರು ಹಾಗೂ ಸಹಕಾರಿ ಬ್ಯಾಂಕ್​'ಗಳು ಕಂಗಾಲಾಗುವಂತೆ ಮಾಡಿದೆ.

ಕಪ್ಪು ಹಣ ಸಹಕಾರಿ ಬ್ಯಾಂಕ್​ ಸೇರುತ್ತಿದೆ ಎಂಬ ಗುಮಾನಿ: ಸಹಕಾರಿ ಬ್ಯಾಂಕ್​ಗಳಲ್ಲಿ ಹಳೇ ನೋಟು ಚಲಾವಣೆ ರದ್ದು 

ರಾಷ್ಟ್ರೀಕೃತ ಬ್ಯಾಂಕ್'​ಗಳಲ್ಲಿ  ಹಳೆಯ ನೋಟುಗಳನ್ನು ಪಡೆಯುವ ವ್ಯವಸ್ಥೆಯಿಂದ ಸಹಕಾರಿ ಬ್ಯಾಂಕ್​ಗಳನ್ನ ಹೊರಗಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಬಹುಶಃ ಕಪ್ಪು ಹಣ ಸಹಕಾರಿ ಬ್ಯಾಂಕ್​ ಸೇರುತ್ತಿದೆ ಎಂಬ ಗುಮಾನಿಯಿಂದ ರಿಸರ್ವ್​ ಬ್ಯಾಂಕ್​ ಇಂಥಹುದ್ದೊಂದು ಸುತ್ತೋಲೆ  ಹೊರಡಿಸಿರಬಹುದು. ಆದರೆ, ಕೇಂದ್ರದ ಈ ನಿರ್ಧಾರದಿಂದ ವ್ಯವಹಾರಕ್ಕೆ ತೊಂದರೆ ಆಗಿದೆ ಎನ್ನುವುದು ರಾಜ್ಯ ಸಹಕಾರ ಸಚಿವರ ವಾದ.

ಒಟ್ಟಾರೆ, ಸಾವಿರ, ಐದುನೂರು ರೂಪಾಯಿ ಹಳೇ ನೋಟು ಬ್ಯಾನ್'​ನಿಂದ ಜನ ಎಟಿಎಂಗಳ ಎದುರು ಕ್ಯೂ ನಿಲ್ಲುವ ಸಂಕಷ್ಟ. ಆದರೆ, ಸಹಕಾರ ಬ್ಯಾಂಕ್'​ಗಳಲ್ಲೂ ಹಳೇ ನೋಟು ಚಲಾವಣೆಕಳೆದುಕೊಂಡಿದ್ದು ರೈತರು ಹಾಗೂ ಸಹಕಾರಿ ಬ್ಯಾಂಕ್​ಗಳ ನಿದ್ದೆಗೆಡಿಸಿದ್ದಂತೂ ಸತ್ಯ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೋಲಾರ: ಅಪ್ಪ- ಅಮ್ಮನ ವಿಚ್ಚೇಧನಕ್ಕೆ ಮನನೊಂದು 26 ವರ್ಷದ ಪುತ್ರ ಆತ್ಮ*ಹತ್ಯೆ!
ಟೊಯೋಟಾ ಹೈಡ್ರೋಜನ್ ಕಾರು ಮೂಲಕ ಸಂಸತ್‌ಗೆ ಬಂದ ಪ್ರಹ್ಲಾದ್ ಜೋಶಿ, ಇದರ ಲಾಭವೇನು?