ಸಾಲ ಮನ್ನಾಗೆ 24 ತಾಸು ಗಡುವು: ಈಶ್ವರಪ್ಪ

Published : May 26, 2018, 07:13 AM IST
ಸಾಲ ಮನ್ನಾಗೆ 24 ತಾಸು ಗಡುವು: ಈಶ್ವರಪ್ಪ

ಸಾರಾಂಶ

ಮುಖ್ಯ​ಮಂತ್ರಿ ಎಚ್‌.​ಡಿ.​ ಕು​ಮಾ​ರ​ಸ್ವಾಮಿ ಅವರು 24 ಗಂಟೆ​ಯಲ್ಲಿ ರೈತರ ಸಾಲಮನ್ನಾ ಮಾಡ​ದಿ​ದ್ದರೆ, ಸೋಮವಾರ ಕರ್ನಾ​ಟಕ ಬಂದ್‌ ಮಾಡುವುದು ನಿಶ್ಚಿತ ಎಂದು ಶಾಸಕ ಕೆ.ಎ​ಸ್‌.​ಈ​ಶ್ವ​ರಪ್ಪ ಎಚ್ಚ​ರಿ​ಸಿ​ದ್ದಾರೆ.

ಹರಿ​ಹ​ರ/ದಾವ​ಣ​ಗೆರೆ:  ಮುಖ್ಯ​ಮಂತ್ರಿ ಎಚ್‌.​ಡಿ.​ ಕು​ಮಾ​ರ​ಸ್ವಾಮಿ ಅವರು 24 ಗಂಟೆ​ಯಲ್ಲಿ ರೈತರ ಸಾಲಮನ್ನಾ ಮಾಡ​ದಿ​ದ್ದರೆ, ಸೋಮವಾರ ಕರ್ನಾ​ಟಕ ಬಂದ್‌ ಮಾಡುವುದು ನಿಶ್ಚಿತ ಎಂದು ಶಾಸಕ ಕೆ.ಎ​ಸ್‌.​ಈ​ಶ್ವ​ರಪ್ಪ ಎಚ್ಚ​ರಿ​ಸಿ​ದ್ದಾರೆ.

ದಾವಣಗೆರೆ ಜಿಲ್ಲೆ ಹರಿ​ಹರ ಸಮೀ​ಪದ ಬೆಳ್ಳೂ​ಡಿಯ ಕಾಗಿ​ನೆಲೆ ಗುರು​ಪೀ​ಠಕ್ಕೆ ಶುಕ್ರ​ವಾರ ಭೇಟಿ ನೀಡಿದ ವೇಳೆ ಸುದ್ದಿ​ಗಾ​ರ​ರೊಂದಿಗೆ ಮಾತ​ನಾ​ಡಿದ ಅವರು, ಚುನಾ​ವಣೆ ಪೂರ್ವ​ದಲ್ಲಿ ರೈತರ ಸಾಲಮನ್ನಾ ಮಾಡು​ವು​ದಾಗಿ ಭರ​ವಸೆ ನೀಡಿದ್ದ ಕುಮಾ​ರ​ಸ್ವಾಮಿ ಅವರು ಸಿಎಂ ಆಗುತ್ತಿದ್ದಂತೆಯೇ ಹೊಣೆಯಿಂದ ನುಣು​ಚಿ​ಕೊ​ಳ್ಳಲು ಪ್ರಯತ್ನಿಸುತ್ತಿರುವದು ಸರಿಯಲ್ಲ ಎಂದರು.

ಬಿಜೆಪಿ ಎಂದಿಗೂ ರೈತರ ಪರ​ವಾಗಿರುವ ಪಕ್ಷ​. ರೈತರ ಸಾಲಮನ್ನಾ ವಿಚಾ​ರದಲ್ಲಿ ಹೋರಾ​ಟ​ದಿಂದ ಹಿಂದೆ ಸರಿ​ಯುವ ಪ್ರಶ್ನೆಯೇ ಇಲ್ಲ. ಮಾಜಿ ಸಿಎಂ ಸಿದ್ದ​ರಾ​ಮಯ್ಯ ಬಗ್ಗೆ ವಿಪ​ಕ್ಷ ನಾಯಕ ಬಿ.ಎ​ಸ್‌. ​ಯ​ಡಿ​ಯೂ​ರಪ್ಪ ಅವರು ಮೃದು​ಧೋ​ರಣೆ ತೋರಿಲ್ಲ. ಜೆಡಿ​ಎ​ಸ್‌​ನ​ವರು ಯಾವ ರೀತಿ ಬಳ​ಸಿ​ಕೊ​ಳ್ಳು​ತ್ತಿ​ದ್ದಾ​ರೆಂಬ ಸಂಗ​ತಿ​ಯನ್ನು ಮಾನ​ವೀ​ಯ​ತೆ ದೃಷ್ಟಿ​ಯಿಂದ ಹೇಳಿ​ದ್ದಾ​ರಷ್ಟೇ. ನಾವು ಅಧಿ​ವೇ​ಶ​ನ​ದಿಂದ ಪಲಾ​ಯನ ಮಾಡಿಲ್ಲ. ರೈತರ ಸಮಸ್ಯೆ ಪರಿಹರಿಸುವಂತೆ ಒತ್ತಾಯಿಸಿಯೇ ಸದನದಿಂದ ಹೊರಬಂದಿವೆ. ಅದಕ್ಕೆ ಕಾಂಗ್ರೆಸ್‌-ಜೆಡಿಎಸ್‌ ಪಲಾಯನ ಎಂದರೆ ನಾವೇನು ಮಾಡಲು ಸಾಧ್ಯ? ನಮಗೆ ರೈತರು, ಜನರ ಹಿತವೇ ಮುಖ್ಯ​ ಎಂದರು.

ಮತ್ತೆ ಮೋದಿ ಪ್ರಧಾನಿ ಆಗ್ತಾರೆ:

ದಾವಣಗೆರೆಯಲ್ಲೂ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಮತ್ತು ರಾಷ್ಟ್ರದಲ್ಲಿ ಅವ​ಕಾ​ಶ​ವಾದಿ ರಾಜ​ಕಾ​ರಣ ಮಾಡು​ವ​ವ​ರೆಲ್ಲಾ ಒಂದಾ​ಗಿರುವುದು ಗಮನಾರ್ಹ. ತೃತೀಯ ರಂಗದವರ ಆಟ ನಡೆ​ಯು​ವು​ದಿ​ಲ್ಲ. 2019ರ ಚುನಾ​ವ​ಣೆ​ಯಲ್ಲೂ ಮತ್ತೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗಲಿದ್ದಾರೆ. ಈಗ ಕಾಂಗ್ರೆಸ್‌ ಸಹ ತೃತೀಯ ರಂಗವನ್ನು ಸೇರೆಕೊಳ್ಳುವ ಮೂಲಕ ದೇಶಾ​ದ್ಯಂತ ತನ್ನ ಸಂಪೂರ್ಣ ಅಸ್ತಿ​ತ್ವ​ವನ್ನೇ ಕಳೆ​ದು​ಕೊಂಡಿದೆ.

ಸಾಣೇ​ಹಳ್ಳಿ ಶ್ರೀ ಬಗ್ಗೆ ಹೇಳಿ​ಕೆಗೆ ಖಂಡನೆ

ಯಾವುದೇ ಮಠಾ​ಧೀ​ಶರು ಎಂದಿಗೂ ರಾಜ​ಕೀಯ ಮಾಡಿಲ್ಲ. ಸಿರಿ​ಗೆ​ರೆ ಪೀಠದ ಸಾಣೇ​ಹಳ್ಳಿಯ ಡಾ.ಪಂಡಿ​ತಾ​ರಾಧ್ಯ ಶಿವಾ​ಚಾರ್ಯ ಶ್ರೀಗಳ ಬಗ್ಗೆ ಸಿಎಂ ಕುಮಾ​ರ​ಸ್ವಾಮಿ ವೈಯ​ಕ್ತಿ​ಕ​ ವಾಗ್ದಾಳಿ ನಡೆ​ಸಿದ್ದು ಸರಿ​ಯಲ್ಲ. ಇದು ಇಡೀ ಹಿಂದುಗಳಿಗೆ ವಿರುದ್ಧ ಮಾತನಾಡಿದಂತೆ. ಸಿಎಂ ಆದ ಕೂಡಲೇ ಯಾರೂ ಸ್ವಾಮೀಜಿಗಳಿಗಿಂತ ದೊಡ್ಡವರಾಗುವುದಿಲ್ಲ. ತಪ್ಪು ಮಾಡಿ​ದ​ವ​ರಿಗೆ ಬುದ್ಧಿ ಹೇಳುವ, ಸರಿ ದಾರಿ ತೋರುವ ಕೆಲ​ಸ​ವನ್ನು ಸಾಣೇ​ಹಳ್ಳಿ ಶ್ರೀಗಳು ನಿರಂತ​ರ​ವಾಗಿ ಮಾಡಿ​ಕೊಂಡು ಬಂದ​ವರು. ನಾಡಿನ ಜನ, ರೈತರ ಪರ​ವಾಗಿ ಪ್ರಶ್ನೆ ಮಾಡಿ​ದ್ದಾ​ರೆಯೇ ಹೊರತು ಬೇರಾ​ವುದೇ ಉದ್ದೇ​ಶ​ದಿಂದಲ್ಲ. ಇದನ್ನು ಕುಮಾ​ರ​ಸ್ವಾಮಿ ಅರಿ​ಯಲಿ ಎಂದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಸಕ ಹುಸೇನ್‌ಗೆ ಮಾತಿನ ಚಟ: ಆಪ್ತ ಶಾಸಕನ ವಿರುದ್ಧವೇ ಡಿಕೆಶಿ ಕೆಂಡಾಮಂಡಲ
ಮೇಲ್ಮನೇಲಿ ಕಾಂಗ್ರೆಸ್‌ಗೆ ಬಹುಮತ ಬಂದ್ರೆ ಹೊರಟ್ಟಿ ಪದಚ್ಯುತಿ: ಸಿಎಂ ಸಿದ್ದರಾಮಯ್ಯ ಸ್ಪಷ್ಟೋಕ್ತಿ