ಮಳೆಯಿಂದಾಗಿ ಕೆರೆಗೆ ವಾಲಿದ ವಿದ್ಯುತ್ ಕಂಬಗಳು: ಮುನೇಶ್ವರ ಕೆರೆಯಲ್ಲಿ ಹರಿಯುತ್ತಿದೆ ವಿದ್ಯುತ್

Published : Sep 28, 2017, 10:14 AM ISTUpdated : Apr 11, 2018, 12:59 PM IST
ಮಳೆಯಿಂದಾಗಿ ಕೆರೆಗೆ ವಾಲಿದ ವಿದ್ಯುತ್ ಕಂಬಗಳು: ಮುನೇಶ್ವರ ಕೆರೆಯಲ್ಲಿ ಹರಿಯುತ್ತಿದೆ ವಿದ್ಯುತ್

ಸಾರಾಂಶ

ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದ ಮುನೇಶ್ವರ ಕೆರೆಯಲ್ಲಿ  ವಿದ್ಯುತ್​ ಕಂಬಗಳು ಬಿದ್ದು ಕೆರೆಯಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದರೂ ಬೆಸ್ಕಾಂ ಯಾವುದೇ ಕ್ರಮಗೊಂಡಿಲ್ಲ. 

ಬೆಂಗಳೂರು(ಸೆ.28): ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸಿಂಗೇನ ಅಗ್ರಹಾರ ಗ್ರಾಮದ ಮುನೇಶ್ವರ ಕೆರೆಯಲ್ಲಿ  ವಿದ್ಯುತ್​ ಕಂಬಗಳು ಬಿದ್ದು ಕೆರೆಯಲ್ಲಿ ವಿದ್ಯುತ್​ ಪ್ರವಹಿಸುತ್ತಿದ್ದರೂ ಬೆಸ್ಕಾಂ ಯಾವುದೇ ಕ್ರಮಗೊಂಡಿಲ್ಲ. 

ಮಳೆಯಿಂದಾಗಿ ಕೆರೆ ತುಂಬಿದ್ದು ಕೆರೆ ಪಕ್ಕದಲ್ಲೇ ಇರುವ ವಿದ್ಯುತ್ ಕಂಬ ವಾಲಿಕೊಂಡಿವೆ. ಇನ್ನೂ 11ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗಳು ಕೆರೆಯ ನೀರಿಗೆ ತಾಕುತಿರುವುದರಿಂದ ನೀರಿನಲ್ಲಿ ವಿದ್ಯುತ್ ಹರಿಯುತ್ತಿದೆ. ರೈತರು ಕೆರೆಯಲ್ಲಿ ಹಸುಗಳಿಗೆ ನೀರು ಕುಡಿಸಲು ಆಗಮಿಸುತ್ತಾರೆ. ಹೀಗಾಗಿ ನೀರಿನಲ್ಲಿ ವಿದ್ಯುತ್ ಹರಿಯುತ್ತಿರುವುದರಿಂದ ಬೆಳಗಿನಿಂದ ಸಂಜೆವರೆಗೂ ಕಳೆದ 3 ದಿನಗಳಿಂದ ರೈತರ ಗುಂಪು ಕೆರೆ ಬಳಿ ಬೀಡು ಬಿಟ್ಟು ಕೆರೆಗೆ ಯಾರೂ ತೆರಳದಂತೆ ಕಾಯುತ್ತಿದ್ದಾರೆ. ಇಷ್ಟಾದರೂ ಬೆಸ್ಕಾಂ ಮಾತ್ರ ಕ್ರಮಕ್ಕೆ ಮುಂದಾಗಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸೀರಿಯಲ್‌ ನಟಿ ಅ*ತ್ಯಾಚಾರ ಮಾಡಿ ಬೆದರಿಸಿ ಮದುವೆ, ಈಗ ನಡುರಸ್ತೆಯಲ್ಲಿಯೇ ಅತ್ತೆ-ಮಾವನ ಮೇಲೆ ಹಲ್ಲೆ!
2 ತಿಂಗಳ ಗೃಹಲಕ್ಷ್ಮಿ ಹಣ ಎಲ್ಲಿಗೆ ಹೋಯ್ತು?, ವಿಪಕ್ಷಗಳ ಆಕ್ರೋಶಕ್ಕೆ ಹೆಬ್ಬಾಳ್ಕರ್ ಭಾವುಕ, ನಾನು ಮಹಿಳೆ ಎಂಬ ಕಾರಣಕ್ಕೆ ಹೀಗೆ ಮಾಡ್ತೀರಾ ಎಂದ ಸಚಿವೆ