ಸಾರಿಗೆ ಅಧಿಕಾರಿಗಳಿಂದ ಸಚಿವ ಹೆಚ್.ಎಂ.ರೇವಣ್ಣ ಎಲೆಕ್ಷನ್ ಫಂಡ್ ಕಲೆಕ್ಷನ್?

Published : Mar 23, 2018, 08:29 PM ISTUpdated : Apr 11, 2018, 12:52 PM IST
ಸಾರಿಗೆ ಅಧಿಕಾರಿಗಳಿಂದ ಸಚಿವ ಹೆಚ್.ಎಂ.ರೇವಣ್ಣ ಎಲೆಕ್ಷನ್ ಫಂಡ್ ಕಲೆಕ್ಷನ್?

ಸಾರಾಂಶ

ಅಧಿಕಾರಿಗಳಿಗೆ ಬೆದರಿಸಿ ಕೋಟ್ಯಾಂತರ ರೂಪಾಯಿ ಸಂಗ್ರಹ..? ಪ್ರಾಮಾಣಿಕ ಅಧಿಕಾರಿಯಿಂದ ಕೇಂದ್ರ ಚುನಾವಣಾ ಆಯೋಗಕ್ಕೆ ದೂರು.

ಬೆಂಗಳೂರು: ಚುನಾವಣೆ ಹತ್ತಿರವಾಗುತ್ತಿದ್ದಂತೆ ಅಧಿಕಾರಿಗಳ ಮೂಲಕ ಸರ್ಕಾರ ಫಂಡ್​ ಸಂಗ್ರಹಕ್ಕೆ ಮುಂದಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಸಾರಿಗೆ ಅಧಿಕಾರಿಗಳ ಮೂಲಕ ಸಾರಿಗೆ ಸಚಿವ ಹೆಚ್​.ಎಂ.ರೇವಣ್ಣ ಕಲೆಕ್ಷನ್​​ ಇಳಿದಿದ್ದಾರಾ..? ಸಾರಿಗೆ ಸಿಬ್ಬಂದಿಯೊಬ್ಬರು ಚುನಾವಣಾ ಆಯೋಗಕ್ಕೆ ಬರೆದ ಪತ್ರ ಈ ಎಲ್ಲಾ ಅನುಮಾನಗಳನ್ನು ಹುಟ್ಟಿಹಾಕಿದೆ.

ಎಲೆಕ್ಟ್ರಾನಿಕ್​ ಸಿಟಿ ವಿಭಾಗದ ಆರ್​ಟಿಓ ಗಾಯತ್ರಿದೇವಿ ಅವರು ಎಲೆಕ್ಷನ್​​ ಫಂಡ್​​ಗಾಗಿ ಲಕ್ಷಾಂತರ ರೂಪಾಯಿ ನೀಡುವಂತೆ ತಮ್ಮ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.  ಮೀಟಿಂಗ್​ ಕರೆದಿದ್ದ ಆರ್​ಟಿಓ ಗಾಯಂತ್ರಿ ದೇವಿ ಗುಮಾಸ್ತರು 15 ಸಾವಿರ, ಎಸ್​ಡಿಎ, ಎಫ್​ಡಿಎ 25 ಸಾವಿರ , ಅಧೀಕ್ಷಕರು 40 ಹಾಗೂ ಮೋಟಾರು ವಾಹನ ಇನ್ಸ್​ಪೆಕ್ಟರ್​ 1 ಲಕ್ಷ ನೀಡುವಂತೆ ತಾಕೀತು ಮಾಡಿದ್ದಾರೆ. ಹಣ ಕೊಡದಿದ್ದರೇ ಪರಿಣಾಮ ಸರಿಯಿರುವುದಿಲ್ಲ ಎಂದು ತಮ್ಮ ಸಿಬ್ಬಂದಿಗೆ ಧಮಕಿ ಹಾಕಲಾಗಿದೆ.

ಲಂಚ ಪಡೆದು ಕೊಡ್ತಿರೋ ಅಥಾವ ಸಾಲ ಮಾಡಿಯಾದರೂ ಕೊಡಲೇಬೇಕು. ಒಂದು ವೇಳೆ ಹಣ ನೀಡದೇ ಇದ್ದಲ್ಲಿ ಹೆಡ್​ ಆಫೀಸ್​ಗೆ ಕಂಪ್ಲೈಂಟ್​​ ಮಾಡಿ ಟ್ರಾನ್ಸ್​ಫರ್​ ಮಾಡಿಸುತ್ತೇನೆ ಎಂದು ಗಾಯತ್ರಿ ದೇವಿ ಸಿಬ್ಬಂದಿಗಳಿಗೆ ಬೆದರಿಕೆ ಹಾಕಿದ್ದಾರೆ ಎಂದು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ದಾಖಲಾಗಿದೆ.

ಗಾಯಂತ್ರಿ ದೇವಿ ಅವರು ಹಣ ನೀಡುವಂತೆ ಧಮಕಿ ಹಾಕಿದ್ದಕ್ಕೆ ಕೆಲ ಸಿಬ್ಬಂದಿ ವಿರೋಧ ವ್ಯಕ್ತಪಡಿಸಿದ್ದಾರೆ. ಅಲ್ಲದೆ ನೊಂದ ಸಿಬ್ಬಂದಿ ಒಬ್ಬರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು ತನಿಖೆ ನಡೆಸುವಂತೆ ಮನವಿ ಮಾಡಿಕೊಂಡಿದ್ದಾರೆ.

ಪತ್ರವನ್ನ ಗಂಭಿರವಾಗಿ ಪರಿಗಣಿಸಿರುವ ಚುನಾವಣಾ ಆಯೋಗ ಸಾರಿಗೆ ಆಯುಕ್ತರಿಗೆ ಪತ್ರ ಬರೆದು ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಒಟ್ಟಾರೆ, ಸರ್ಕಾರ ಚುನಾವಣೆ ಹೆಸರಲ್ಲಿ ಅಧಿಕಾರಿಗಳನ್ನು ಭ್ರಷ್ಟಾಚಾರಕ್ಕೆ ನೂಕಿ ಹಣ ಸಂಗ್ರಹಕ್ಕೆ ಮುಂದಾಗಿರುವುದು ಮಾತ್ರ ದುರಂತ...

[ವರದಿ: ರಮೇಶ್​.ಕೆ.ಹೆಚ್​ ಕ್ರೈಂ ಬ್ಯೂರೋ ]

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್
ರಾಜ್ಯದ ತಾಪಮಾನ 12°Cಗೆ ಕುಸಿತ-ಕರುನಾಡಿಗೆ ಶೀತ ಕಂಟಕ ಖಚಿತ-ಬೆಂಗಳೂರು ಜನತೆಗೆ ಮೈನಡುಕ ಉಚಿತ!