
ನವದೆಹಲಿ(ನ. 18): ಬ್ಯಾಂಕಿನಲ್ಲಿ ನೋಟು ವಿನಿಮಯ ಮತ್ತು ಹಣ ವಿತ್'ಡ್ರಾ ಮಾಡಿಕೊಳ್ಳುವ ಜನರ ಬೆರಳಿಗೆ ಶಾಯಿ ಹಾಕುವ ಸರಕಾರದ ನಿರ್ಧಾರಕ್ಕೆ ಚುನಾವಣಾ ಆಯೋಗ ತಡೆಗಾಲು ಹಾಕುತ್ತಿದೆ. ಬೆರಳಿಗೆ ಶಾಯಿ ಹಾಕುವ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಸರಕಾರವನ್ನು ಕೇಳಿಕೊಂಡಿದೆ. ಹಲವು ರಾಜ್ಯಗಳಲ್ಲಿ ಸದ್ಯದಲ್ಲೇ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇಂಕಿನ ಗೊಂದಲ ಉಂಟಾಗುವ ಸಾಧ್ಯತೆ ಇದೆ. ಹೀಗಾಗಿ, ಇಂಕು ಬಳಸದಿರುವುದು ಒಳ್ಳೆಯದು ಎಂದು ಚುನಾವಣಾ ಆಯೋಗವು ಹಣಕಾಸು ಇಲಾಖೆಗೆ ಸಲಹೆ ನೀಡಿದೆ.
ಚುನಾವಣೆ ವೇಳೆ ಮತದಾರರ ಎಡಗೈನ ತೋರುಬೆರಳಿಗೆ ಇಂಕು ಹಾಕಲಾಗುತ್ತದೆ. ಆದರೆ, ನೋಟು ವಿನಿಮಯದ ವೇಳೆ ಜನರ ಬಲಗೈನ ಬೆರಳಿಗೆ ಇಂಕು ಹಾಕಲು ನಿರ್ಧರಿಸಲಾಗಿದೆ ಎಂಬುದು ಸರಕಾರದ ಸಮರ್ಥನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.