ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ ಬಂಧನ

By Suvarna Web DeskFirst Published Feb 17, 2018, 8:24 AM IST
Highlights

ಐಎನ್‌ಎಸ್ ಮೀಡಿಯಾ ಅಕ್ರಮ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ನವದೆಹಲಿ: ಐಎನ್‌ಎಸ್ ಮೀಡಿಯಾ ಅಕ್ರಮ ಹಣಕಾಸು ವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿ ಕಾರ್ತಿ ಚಿದಂಬರಂ ಲೆಕ್ಕ ಪರಿಶೋಧಕ (ಸಿಎ) ಎಸ್.ಭಾಸ್ಕರರಾಮನ್‌ರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ.

ಬಂಧಿತ ರನ್ನು ದೆಹಲಿ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಅವರನ್ನು 5 ದಿನಗಳ ವಿಚಾರಣಾ ವಶಕ್ಕೆ ಒಪ್ಪಿಸಿದೆ.

ದೆಹಲಿಯ ಹೋಟೆಲೊಂದರಿಂದ ಶುಕ್ರವಾರ ಭಾಸ್ಕರ ರಾಮನ್‌ರನ್ನು ವಶಕ್ಕೆ ಪಡೆಯಲಾಗಿತ್ತು. ಹಲವು ಸಮನ್ಸ್ ಗಳನ್ನು ಜಾರಿಗೊಳಿಸಲಾಗಿದ್ದರೂ ಅವರು ಕೋರ್ಟ್‌ಗೆ ಹಾಜರಾಗಿರಲಿಲ್ಲ ಎಂದು ಇಡಿ ಪರ ನಿತೇಶ್ ರಾಣಾ ಕೋರ್ಟ್‌ಗೆ ತಿಳಿಸಿದ್ದರು.

click me!