ಬೆಂಗಳೂರು ಶಾಸಕನಿಗೆ ಸಂಪುಟ ಸೇರ್ಪಡೆಗೆ ಸಿದ್ಧವಾಗಲು ಸೂಚನೆ

Published : Jun 14, 2018, 09:55 PM ISTUpdated : Jun 15, 2018, 12:01 AM IST
ಬೆಂಗಳೂರು ಶಾಸಕನಿಗೆ ಸಂಪುಟ ಸೇರ್ಪಡೆಗೆ ಸಿದ್ಧವಾಗಲು ಸೂಚನೆ

ಸಾರಾಂಶ

ರಾಮಲಿಂಗಾ ರೆಡ್ಡಿ ಸಂಪುಟ ಸೇರಲು ಹೈಕಮಾಂಡ್ ಸೂಚನೆ ಮುಂದಿನ ಭಾನುವಾರ ಅಥವಾ ಸೋಮವಾರ ಸಂಪುಟ ವಿಸ್ತರಣೆ

ಬೆಂಗಳೂರು[ಜೂ.14]: ಬೆಂಗಳೂರಿನ ಹಿರಿಯ ಕಾಂಗ್ರೆಸ್ ಶಾಸಕ ರಾಮಲಿಂಗಾ ರೆಡ್ಡಿಗೆ ಸಚಿವಸಂಪುಟ ಸೇರಲು ಸಿದ್ದರಾಗಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿದೆ.

ಭಾನುವಾರ ಅಥವಾ ಸೋಮವಾರ ಸಚಿವ ಸಂಪುಟ ವಿಸ್ತರಣೆಯಾಗುವ ಸಾಧ್ಯತೆಯಿದ್ದು ಬಿಟಿಎಂ ಬಡಾವಣೆ ಶಾಸಕ ರಾಮಲಿಂಗಾ ರೆಡ್ಡಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸುವರ್ಣ ನ್ಯೂಸ್ .ಕಾಂ ಸೋದರ ಸಂಸ್ಥೆ ಸುವರ್ಣ ನ್ಯೂಸ್ ಗೆ ಕಾಂಗ್ರೆಸ್ ವರಿಷ್ಠರ ಉನ್ನತ ಮೂಲಗಳು ಮಾಹಿತಿ ನೀಡಿದೆ.

ಜಯನಗರ ಕ್ಷೇತ್ರದಲ್ಲಿ ಪುತ್ರಿಯನ್ನು ಗೆಲ್ಲಿಸಿ ಖುಷಿಯಲ್ಲಿರುವ ರೆಡ್ಡಿಯವರಿಗೆ ಹೈಕಮಾಂಡ್ ಸಹಿ ನೀಡಿದೆ. ಬೆಂಗಳೂರು ನಗರದಿಂದ ಕಾಂಗ್ರೆಸ್ ಪರವಾಗಿ ಈಗಾಗಲೇ ಜಮೀರ್ ಅಹಮದ್, ಕೆ,ಜೆ ಜಾರ್ಜ್ ಹಾಗೂ ಕೃಷ್ಣ ಬೈರೇಗೌಡ  ಸಚಿವರಾಗಿದ್ದಾರೆ. ಹಸ್ತ ಪಕ್ಷದಿಂದ ಬೆಂಗಳೂರು ನಗರದಲ್ಲಿ ಅತಿ ಹೆಚ್ಚಿನ ಸಂಖ್ಯೆಯ 16 ಮಂದಿ ಶಾಸಕರು ಆಯ್ಕೆಯಾಗಿದ್ದಾರೆ. ರಾಮಲಿಂಗಾ ರೆಡ್ಡಿ ಅವರ ಜೊತೆಗೆ ಇನ್ನು ಮೂವರು ಕಾಂಗ್ರೆಸ್ ಶಾಸಕರು ಮಂತ್ರಿಯಾಗಲಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೊಪ್ಪಳದಲ್ಲಿ ಭೀಕರ ಅಪಘಾತ, ಬೈಕ್‌ನಲ್ಲಿದ್ದ ಮೂವರು ಸ್ಥಳದಲ್ಲೇ ಸಾವು
ವನ್ಯಜೀವಿ-ಮಾನವ ಸಂಘರ್ಷ ಶಾಶ್ವತ ಪರಿಹಾರಕ್ಕೆ ಕ್ರಮ: ಸಚಿವ ಈಶ್ವರ್‌ ಖಂಡ್ರೆ