ದುನಿಯಾ ಸೂರಿ ಮೈಯಲ್ಲೂ ಸಿಕ್ಸ್'ಪ್ಯಾಕ್ : ಸಿಕ್ಸ್'ಪ್ಯಾಕ್ ಆಗಲು ಕಾರಣರಾದವರು ಯಾರು ಗೊತ್ತೆ ?

Published : Oct 31, 2016, 07:12 PM ISTUpdated : Apr 11, 2018, 12:39 PM IST
ದುನಿಯಾ ಸೂರಿ ಮೈಯಲ್ಲೂ ಸಿಕ್ಸ್'ಪ್ಯಾಕ್ : ಸಿಕ್ಸ್'ಪ್ಯಾಕ್ ಆಗಲು ಕಾರಣರಾದವರು ಯಾರು ಗೊತ್ತೆ ?

ಸಾರಾಂಶ

ಪತ್ರಕರ್ತರು, ‘ಏನ್ ಸಾರ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸ್ತೀರಲ್ಲಾ?’ ಎಂದಾಗ ‘ಹೆಂಗೆಂಗೋ ಕಾಣಬಾರದು ಅಂತ ಹಿಂಗಾಗಿದ್ದೀನಿ, ನೋಡಿ’ ಎಂದು ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರಿಸಿದ್ದರು

  ದುನಿಯಾ ಸೂರಿ ನಿಜಕ್ಕೂ ಸ್ಪೆಷಲ್ ಡೈರೆಕ್ಟರ್ ಆಗಿದ್ದಾರೆ. ಹೀರೊಗಳನ್ನೂ ಹೀರೋಗಳನ್ನೂ ಮೀರಿಸೋ ಹಾಗೆ ತಯಾರಾಗಿದ್ದಾರೆ. ಕೇವಲ 6 ತಿಂಗಳಲ್ಲಿ

ತೆರೆ ಮೇಲೆ ಮಿಂಚುವ ಹೀರೋಗಳು ಸಿಕ್ಸ್‌ಪ್ಯಾಕ್ ಮಾಡುವುದು ಕಾಮನ್. ಆದರೆ, ಪರದೆ ಮೇಲೆ ಆ ನಾಯಕ ನಟರನ್ನು ಆಟವಾಡಿಸುವ ಹಿಂದಿನ ಸೂತ್ರಧಾರಿ ಸಿಕ್ಸ್‌ಪ್ಯಾಕ್ ಮೂಡಿಸಿಕೊಂಡರೆ ಹೇಗಿರುತ್ತದೆ ಎಂಬುದಕ್ಕೆ ಈ ಫೊಟೋದಲ್ಲಿರುವ ಸೂರಿ ಸಾಕ್ಷಿ! ತುಂಬಾ ದಿನಗಳ ನಂತರ ‘ದೊಡ್ಮನೆ ಹುಡ್ಗ’ ಚಿತ್ರದ ಪತ್ರಿಕಾಗೋಷ್ಟಿಯಲ್ಲಿ ಮಾಧ್ಯಮಗಳ ಮುಂದೆ ಬಂದಿದ್ದ ಸೂರಿ ತೀರಾ ತಳ್ಳಗಾಗಿದ್ದರು. ಆಗಲೇ ಪತ್ರಕರ್ತರು, ‘ಏನ್ ಸಾರ್ ಸಿಕ್ಕಾಪಟ್ಟೆ ಯಂಗ್ ಆಗಿ ಕಾಣಿಸ್ತೀರಲ್ಲಾ?’ ಎಂದಾಗ ‘ಹೆಂಗೆಂಗೋ ಕಾಣಬಾರದು ಅಂತ ಹಿಂಗಾಗಿದ್ದೀನಿ, ನೋಡಿ’ ಎಂದು ತಮ್ಮದೇ ಟಿಪಿಕಲ್ ಸ್ಟೈಲ್‌ನಲ್ಲಿ ಉತ್ತರಿಸಿದ್ದರು ಸೂರಿ.

ಈಗ ನೋಡಿದರೆ ‘ದೊಡ್ಮನೆ ಹುಡ್ಗ’ನನ್ನು ತೆರೆಮೇಲೆ ಬಿಟ್ಟು, ‘ಟಗರು’ವನ್ನು ಚಿತ್ರೀಕರಣದ ಮೈದಾನಕ್ಕೆ ಕರೆದುಕೊಂಡು ಬರುವ ಗ್ಯಾಪ್‌ನಲ್ಲಿ ಜಿಮ್‌ನಲ್ಲಿ ವರ್ಕ್‌ಔಟ್ ಮಾಡಿ ಸಿಕ್ಸ್‌ಪ್ಯಾಕ್ ಫಿಕ್ಸ್ ಮಾಡ್ಕೊಂಡಿದ್ದಾರೆ. ಕನ್ನಡ ಚಿತ್ರರಂಗ ಸಿಕ್ಸ್‌ಪ್ಯಾಕ್ ಹೀರೋನನ್ನು (ದುನಿಯಾ ಚಿತ್ರದ ಮೂಲಕ ವಿಜಯ್) ಪರಿಚಯಿಸಿದ ಸೂರಿ, ಈಗ ತಾವೇ ಸಿಕ್ಸ್‌ಪ್ಯಾಕ್ ಕಸರತ್ತಿಗೆ ದೇಹವನ್ನೊಡ್ಡಿದ್ದಾರೆ. ಸೂರಿಯ ಈ ಹೊಸ ಲುಕ್ಕು ಖ್ಯಾತ ಛಾಯಾಗ್ರಾಹಕ ಮಹೇಂದ್ರಸಿಂಹ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಸ್ಟಾರ್ ಹೀರೋಗಳ ಕಣ್ಣು ಕುಕ್ಕುವಂತಿರುವ ಸೂರಿಯ ಈ ವರ್ಕೌಟ್ ಸಿನಿಮಾಕ್ಕಾಗಿಯೇ ಇದ್ದಿರಬಹುದಾ? ಒಟ್ಟಿನಲ್ಲಿ ಕನ್ನಡ ಸಿನಿರಸಿಕರಂತೂ ಮೊದಲ ಸಿಕ್ಸ್‌ಪ್ಯಾಕ್ ನಿರ್ದೇಶಕನ ದರ್ಶನವನ್ನು ಈ ಮೂಲಕ ಮಾಡಿಕೊಂಡಿದ್ದಾರೆ! ಅಂದ ಹಾಗೆ ಈ ರೀತಿಯಾಗಲು ಪ್ರಮುಖ ಕಾರಣ ಅವರ ತಾಯಿಯಂತೆ. 

Click Here : ಪ್ರೇಮಿಗಳೆ ನಂದಿ ಬೆಟ್ಟದಲ್ಲಿ ರೊಮ್ಯಾನ್ಸ್ ಮಾಡುವಾಗ ಎಚ್ಚರ

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ವೀರಪ್ಪನ್‌ಗಿಂತ, ಸಿದ್ದರಾಮಯ್ಯ ಕಾಲದಲ್ಲೇ ಆನೆ ಸಾವು ಜಾಸ್ತಿ.! ಅಂಕಿ-ಅಂಶ ಬಚ್ಚಿಟ್ಟ ಆರ್. ಅಶೋಕ್
ಲಕ್ಸುರಿ ಕಾರು, 1 ಕೇಜಿ ಚಿನ್ನ 100 ಕೋಟಿ ಆಸ್ತಿ: ಟ್ರಾನ್ಸ್‌ಪೋರ್ಟ್ ಅಧಿಕಾರಿಯ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದ ಎಸಿಬಿ