
ರಾಜ್ಯದ್ಯಂತ ಭೀಕರ ಬರಗಾಲ ಆವರಿಸಿದೆ. ಹಲವೆಡೆ ಮುಂಗಾರು ಮಳೆ ಸಿಂಚನವಾಗಿದ್ದರೂ, ರಾಜ್ಯ ಬಹುತೇಕ ಜಿಲ್ಲೆಗಳಲ್ಲಿ ವರುಣ ದೇವ ಸುಳಿದಿಲ್ಲ. ಇದರಿಂದ ಕೃಷಿ ಮಾತು ಪಕ್ಕಕ್ಕಿರಲಿ, ಕುಡಿಯುಲು, ಜಾನುವಾರುಗಳಿಗೂ ನೀರು ಇಲ್ಲದಂತಾಗಿದೆ. ಅಂತರ್ಜಲ ಬರಿದಾಗಿದೆ. ಜಲಾಶಯದಲ್ಲಿ ನೀರು ಇಲ್ಲದಾಗಿದೆ. ಇನ್ನು ಕೆರೆ ಬಾವಿ ಎರಡು ತಿಂಗಳ ಹಿಂದೆಯೇ ನೀರಿಲ್ಲದೆ ಒಣಗಿದೆ. ರಾಜ್ಯದ ಭೀಕರ ಬರಗಾಲ ವಿವರ ಇಲ್ಲಿದೆ.
ಚಿಕ್ಕಮಗಳೂರಿನ ಕಡೂರು ತಾಲೂಕು ದಶಕಗಳ ಬರಗಾಲದಿಂದ ಕಂಗೆಟ್ಟಿದೆ. ಬೆಳೆಗಳು ಒಣಗಿ ಹೋಗಿದ್ದು, ಕುಡಿಯುವ ನೀರಿಗಾಗಿ ಅಲೆದಾಟ ಶುರುವಾಗಿದೆ.
"
ಮೊದಲೇ ನೀರಿಲ್ಲದ ನಾಡಾಗಿರುವ ಚಿತ್ರದುರ್ಗ ಇದೀಗ ಅಕ್ಷರಶ ಒಣಗಿ ಹೋಗಿದೆ. ಇಲ್ಲಿನ ಜನರ ಮೂಲ ವಾಣಿವಿಲಾಸ ಸಾಗರ ಜಲಾಶಯ. ಆದರೆ ಈ ಭಾರಿ ಜಲಾಶಯದ ನೀರಿನ ಮಟ್ಟ ಪಾತಾಳಕ್ಕೆ ಕುಸಿದಿದೆ.
"
ಬರಗಾಲದಿಂದ ತತ್ತರಿಸಿರುವ ಕೊಪ್ಪಳ ಇದೀಗ ಉರಿಬಿಸಿಲಿನಿಂದ ಕಾದ ಕಬ್ಬಿಣದಂತಾಗಿದೆ. ಒಂದೆಡೆ ಕುಡಿಯಲು ನೀರಿಲ್ಲದೇ ಪರದಾಡುತ್ತಿದ್ದರೆ, ಇತ್ತ ರೈತರೂ ಬೆಳೆದ ಬೆಳಗಳು ಫಸಲಿಗೂ ಮುನ್ನವೇ ಒಣಗಿ ಹೋಗಿದೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.