ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ರೈಲು ದುರಂತ

Published : Jun 10, 2019, 09:34 AM IST
ಸಮಯ ಪ್ರಜ್ಞೆಯಿಂದ ತಪ್ಪಿದ ಭಾರೀ ರೈಲು ದುರಂತ

ಸಾರಾಂಶ

ರೈಲ್ವೆ ಚಾಲಕನ ಸಮಯ ಪ್ರಜ್ಞೆಯಿಂದ ಸಂಭವಿಸಬೇಕಿದ್ದ ಭಾರೀ ರೈಲ್ವೆ ದುರಂತವೊಂದು ತಪ್ಪಿದಂತಾಗಿದೆ. 

ಧಾರ​ವಾ​ಡ :  ರೈಲ್ವೆ ಗೇಟ್‌ ಕೀಪರ್‌ ನಿರ್ಲಕ್ಷ್ಯದಿಂದ ಸಂಭವಿಸುತ್ತಿದ್ದ ಭಾರಿ ಅನಾಹುತವೊಂದು ರೈಲ್ವೆ ಎಂಜಿನ್‌ ಚಾಲಕನ ಸಮಯ ಪ್ರಜ್ಞೆಯಿಂದ ಕೂದಲೆಳೆ ಅಂತರದಲ್ಲಿ ತಪ್ಪಿದ ಘಟನೆ ಇಲ್ಲಿನ ಶ್ರೀನಗರ ಬಳಿಯ ರೈಲ್ವೆ ಗೇಟ್‌ನಲ್ಲಿ ಭಾನು​ವಾರ ನಡೆದಿದೆ. 

ಕರ್ನಾಟಕ ವಿಶ್ವವಿದ್ಯಾಲಯದ ಪ್ರವೇಶ ದ್ವಾರದಲ್ಲಿ ಬೆಳಗ್ಗೆ ಗೂಡ್ಸ್‌ ರೈಲ್ವೆ ತೆರಳಿದ ತಕ್ಷಣ ರೈಲ್ವೆ ಗೇಟ್‌ ಕೀಪರ್‌, ಗೇಟ್‌ ತೆರೆದಿದ್ದಾನೆ. ಆಗ ವಾಹನ ಸವಾರರು ತೆರಳುವ ವೇಳೆಗೆ ಏಕಾಏಕಿ ಅದೇ ಟ್ರ್ಯಾಕ್‌ನಲ್ಲಿ ರೈಲ್ವೆ ಎಂಜಿನ್‌ ಬಂದಿದೆ. ಇದನ್ನು ನೋಡಿದ ವಾಹನ ಸವಾರರು ಹಾಗೂ ಜನ ಹೌಹಾರಿದರು. ರೈಲ್ವೆ ಎಂಜಿನ್‌ ಚಾಲಕ ತಕ್ಷಣ ಎಂಜಿನ್‌ ನಿಲ್ಲಿಸಿದ್ದಾನೆ.

ಆತನ ಸಮಯಪ್ರಜ್ಞೆಯಿಂದ ಸಂಭವಿಸಬಹುದಾದ ದೊಡ್ಡ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಕಳೆದ 6 ತಿಂಗಳ ಹಿಂದೆಷ್ಟೇ ಇದೇ ರೈಲ್ವೆಗೇಟ್‌ನಲ್ಲಿ, ಗೇಟ್‌ ತೆರೆದಿದ್ದಾಗಲೇ ರೈಲ್ವೆ ಎಂಜಿನ್‌ ಸಾಗಿತ್ತು. ಈ ವೇಳೆ ಬಸ್‌ ಚಾಲಕ ತೋರಿದ ಜಾಗರೂಕತೆಯಿಂದ ಅನಾಹುತ ತಪ್ಪಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮೋದಿಗೆ ಸಮಾಧಿ ತೋಡುತ್ತೇವೆ: ಕಾಂಗ್ರೆಸ್ ವೋಟ್ ಚೋರಿ ಸಮಾವೇಶದಲ್ಲಿ ಕಾರ್ಯಕರ್ತರ ಘೋಷಣೆ
'ಇದಪ್ಪಾ ಕಾನ್ಪಿಡೆನ್ಸ್‌ ಅಂದ್ರೆ..' ಸ್ಥಳೀಯ ಸಂಸ್ಥೆ ಚುನಾವಣೆ ಫಲಿತಾಂಶ ಬರೋ ಮುನ್ನವೇ 12 ಸಾವಿರ ಲಡ್ಡು ಮಾಡಿಸಿಟ್ಟ ಸ್ಪರ್ಧಿ!