ಪದ್ಮನಾಭ ದೇವಾಲಯದ 'ಬಿ ವಾಲ್ಟ್' ತೆರೆಯಲು ರಾಜಮನೆತನದಿಂದ ವಿರೋಧ

Published : Jul 08, 2017, 03:59 PM ISTUpdated : Apr 11, 2018, 12:43 PM IST
ಪದ್ಮನಾಭ ದೇವಾಲಯದ 'ಬಿ ವಾಲ್ಟ್' ತೆರೆಯಲು ರಾಜಮನೆತನದಿಂದ ವಿರೋಧ

ಸಾರಾಂಶ

ಸುಪ್ರೀಂಕೋರ್ಟ್ ಆದೇಶದನ್ವಯ ಪದ್ಮನಾಭ ದೇವಾಲಯದ ಬಿ ಕೋಣೆಯನ್ನು ತೆರೆಯಲು ಟ್ರಾವೆಂಕೂರಿನ ರಾಜ ಮನೆತನ ವಿರೋಧ ವ್ಯಕ್ತಪಡಿಸಿದೆ.

ತಿರುವನಂತಪುರಂ (ಜು.08): ಸುಪ್ರೀಂಕೋರ್ಟ್ ಆದೇಶದನ್ವಯ ಪದ್ಮನಾಭ ದೇವಾಲಯದ ಬಿ ಕೋಣೆಯನ್ನು ತೆರೆಯಲು ಟ್ರಾವೆಂಕೂರಿನ ರಾಜ ಮನೆತನ ವಿರೋಧ ವ್ಯಕ್ತಪಡಿಸಿದೆ.

ದೇವರ ಆಶಯಕ್ಕೆ ವಿರುದ್ಧವಾಗಿ ಬಿ ಕೋಣೆಯನ್ನು ತೆರೆಯಲು ನಾವು ಅನುಮತಿ ನೀಡುವುದಿಲ್ಲ. ಇದನ್ನು ತೆರೆಯುವುದರಿಂದ ಆಗುವ ಅನಾಹುತಗಳಿಗೆ ನಾವು ಜವಾಬ್ದಾರರಲ್ಲ. ಪದ್ಮನಾಭ ದೇವಾಲಯದ ಪ್ರಧಾನ ಅರ್ಚಕರೂ ಕೂಡಾ ಸರ್ಕಾರದ ಆದೇಶವನ್ನು ವಿರೋಧಿಸಿದ್ದಾರೆ ಎಂದು ರಾಜ ಮನೆತನದ ಹಿರಿಯ ಸದಸ್ಯ ತಿರುನಲ್ ಗೌರಿ ಲಕ್ಷ್ಮೀ ಬಾಯಿ ಹೇಳಿದ್ದಾರೆ.

ಈಗಾಗಲೇ ಒಮ್ಮೆ ಬಿ ಕೋಣೆಯನ್ನು ತೆರೆಯಲಾಗಿತ್ತು. ಆದರೆ ಇದಕ್ಕೆ ರಾಜಮನೆತನ ಈ ಹಿಂದೆಯೂ ಕೂಡಾ ಒಪ್ಪಿಗೆ ನೀಡಿರಲಿಲ್ಲ ಎಂದು ಲೆಕ್ಕ ಮತ್ತು ಮಹಾಪರಿಶೋಧಕ ವಿನೋದ್ ರಾಯ್ ಹೇಳಿದ್ದಾರೆ. ಬಿ ಕೋಣೆಯ ಪಕ್ಕದಲ್ಲಿ ಸಣ್ಣದೊಂದು ಕೋಣೆಯಿದೆ. ಇದನ್ನೇ ಬಿ ಕೋಣೆಯೆಂದು ತೆರೆಯಲಾಗಿತ್ತು ಅಷ್ಟೇ ಎಂದು ರಾಜಮನೆತನ ಸ್ಪಷ್ಟೀಕರಣ ನೀಡಿದೆ.

ಗರ್ಭಗುಡಿಯ ಮೂರ್ತಿಯಿಂದ 8 ವಜ್ರದ ಹರಳುಗಳು ನಾಪತ್ತೆಯಾಗಿದ್ದು ನೆಲಮಹಡಿಯಲ್ಲಿರುವ ಬಿ ಕೋಣೆಯನ್ನು ತೆರೆಯುವಂತೆ ಸುಪ್ರೀಂಕೋರ್ಟ್ ಆದೇಶಿಸಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಆಳಂದ ಮತಚೋರಿ ಆರೋಪ ರಾಜಕೀಯ ಪ್ರೇರಿತ: ಎಸ್‌ಐಟಿ ಕ್ರಮದ ವಿರುದ್ಧ ಸುಭಾಷ್ ಗುತ್ತೇದಾರ್ ಕಿಡಿ
ಪಶ್ಚಿಮ ಬಂಗಾಳದಲ್ಲಿ 1 ಕೋಟಿ ನಕಲಿ ಮತದಾರರಿಗೆ ಕೊಕ್ ಸಾಧ್ಯತೆ