
ಬೆಂಗಳೂರು (ನ.13): ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಾಭಿವೃದ್ಧಿ ಸಚಿವ ಕೆ.ಜೆ ಜಾರ್ಜ್ ಪರಿಷತ್'ನಲ್ಲಿ ಹೇಳಿಕೆ ನೀಡಿದ್ದಾರೆ.
ನಾನು ಗೃಹ ಮಂತ್ರಿಯಾಗಿ ಆರು ತಿಂಗಳಾದ ಮೇಲೆ ಗಣಪತಿ ಆತ್ಮಹತ್ಯೆ ನಡೆದಿದೆ. ಈಗ ನಾನು ಬೆಂಗಳೂರು ಅಭಿವೃದ್ಧಿ ಸಚಿವ. ಗಣಪತಿ ಸಾವಿಗೆ ಕಾರಣ ಕಂಡುಹಿಡಿಯಲು ಪ್ರಕರಣವನ್ನು ಸಿಬಿಐಗೆ ಒಪ್ಪಿಸಲಾಗಿದೆ. ಗಣಪತಿ ಸಾವಿನ ನಂತರ ಅವರ ತಂದೆ ಕುಶಾಲಪ್ಪ ಕೊಟ್ಟ ಹೇಳಿಕೆಯಲ್ಲಿ ನನ್ನ ಹೆಸರು ಪ್ರಸ್ತಾಪವಾಗಿಲ್ಲ. ಜತೆಗೆ ಹೈಕೋರ್ಟ್ ಆದೇಶದ ಪ್ರಕಾರ ಪ್ರಕರಣ ಸಿಐಡಿಗೆ ಒಪ್ಪಿಸಲಾಯ್ತು. ಕೋರ್ಟ್ ನಿಗದಿ ಪಡಿಸಿದ ಗಡುವಿನೊಳಗೆ ತನಿಖೆ ಮುಗಿಸುವಂತೆ ಸೂಚಿಸಲಾಗಿತ್ತು ಎಂದು ಜಾರ್ಜ್ ಹೇಳಿದ್ದಾರೆ.
ಮೊದಲು ಸಿಐಡಿ ವರದಿ ಕೊಟ್ಟು ಬಿ ರಿಪೋರ್ಟ್ ಹಾಕಿದಾಗ,ಗಣಪತಿಯವರ ಪುತ್ರ ಅದನ್ನು ಪ್ರಶ್ನಿಸಿಲ್ಲ. ಈಗ ಸುಪ್ರಿಂಕೋರ್ಟ್ ಆದೇಶದಲ್ಲೂ ಸಿಐಡಿ ವರದಿಯನ್ನು ಯಥಾಸ್ಥಿತಿಯಲ್ಲಿ ಇರಿಸಿಯೇ ಸಿಬಿಐ ತನಿಖೆ ಮಾಡಬೇಕು. ಮೂರು ತಿಂಗಳಲ್ಲಿ ವರದಿ ಕೊಡುವಂತೆ ಸೂಚಿಸಿದ್ದಾರೆ. ಸಿಬಿಐ ಕೇಂದ್ರ ಸರ್ಕಾರದ ಅಧೀನದಲ್ಲಿದೆ. ನಿಮ್ಮ ಬಳಿ ಯಾವುದೇ ದಾಖಲೆ ಸಾಕ್ಷಿ ಇದ್ದರೆ ಅದನ್ನು ಸಿಬಿಐಗೆ ಒಪ್ಪಿಸಲಿ. ಸಿಬಿಐ ವರದಿ ಬರುವವರೆಗೆ ನಾನು ಕೊಲೆ ಮಾಡಿದ್ದೇನೆ ಎಂದು ಆರೋಪಿಸಿ ಸದನದಲ್ಲಿ ಚರ್ಚಿಸುವುದು ಬೇಡ. ಪ್ರತಿಪಕ್ಷಗಳಿಗೆ ಸಿಬಿಐ ಮೇಲೆ ನಂಬಿಕೆ ಇಲ್ಲದಂತಾಗುತ್ತದೆ ಎಂದು ಜಾರ್ಜ್ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.