ಎಡಗಾಲಿನ ಗಾಯಕ್ಕೆ ಬಲಗಾಲಿಗೆ ಆಪರೇಷನ್‌!

Published : Feb 11, 2019, 12:31 PM ISTUpdated : Feb 11, 2019, 01:02 PM IST
ಎಡಗಾಲಿನ ಗಾಯಕ್ಕೆ ಬಲಗಾಲಿಗೆ ಆಪರೇಷನ್‌!

ಸಾರಾಂಶ

ಮಹಿಳೆಯೊಬ್ಬಳು ತನ್ನ ಎಡಗಾಲಿಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ತೆರಳಿದರೆ ವೈದ್ಯರು ಬಲಗಾಲಿಗೆ ಆಪರೇಷನ್‌ ಮಾಡಿ ಕಳುಹಿಸಿದ್ದಾರೆ!

ಭುವನೇಶ್ವರ[ಫೆ.11]: ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಒಡಿಶಾದ ಮಹಿಳೆಯೊಬ್ಬಳು ತನ್ನ ಎಡಗಾಲಿಗೆ ಗಾಯವಾಗಿದೆ ಎಂದು ಆಸ್ಪತ್ರೆಗೆ ತೆರಳಿದರೆ ವೈದ್ಯರು ಬಲಗಾಲಿಗೆ ಆಪರೇಷನ್‌ ಮಾಡಿ ಕಳುಹಿಸಿದ್ದಾರೆ!

ಕೆಯೊಂಜರ್‌ ಜಿಲ್ಲೆಯ ಖಾಬಿಲ್‌ ಎಂಬ ಗ್ರಾಮದಲ್ಲಿ ಮಿಟಾರಾಣಿ ಜೆನಾ ಎಂಬಾಕೆ ಎಡಗಾಲಿಗೆ ಆದ ಗಾಯಕ್ಕೆ ಚಿಕಿತ್ಸೆ ಪಡೆಯಲು ಆನಂದಪುರ ಉಪ ವಿಭಾಗದ ಆಸ್ಪತ್ರೆಗೆ ತೆರಳಿದ್ದಳು. ಮಹಿಳೆಯನ್ನು ತಪಾಸಣೆ ನಡೆಸಿದ ವೈದ್ಯರು ಗಾಯಕ್ಕೆ ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ತಿಳಿಸಿದ್ದರು. ಆದರೆ, ಆಸ್ಪತ್ರೆಯ ಸಿಬ್ಬಂದಿ ಅರವಳಿಕೆ ಮದ್ದು ನೀಡಿ ಇನ್ನೊಂದು ಕಾಲಿಗೆ ಆಪರೇಷನ್‌ ಮಾಡಿದ್ದಾರೆ.

ಪ್ರಜ್ಞೆ ಬಂದ ಬಳಿಕ ಇದನ್ನು ಕಂಡ ಮಹಿಳೆ ಆಘಾತಕ್ಕೆ ಒಳಗಾಗಿದ್ದು, ಅಧಿಕಾರಿಗಳಿಗೆ ದೂರು ನೀಡಿದ್ದಾಳೆ. ಕಾಲಿಗೆ ಗಾಯವಾಗಿದ್ದರೂ ಸ್ವಲ್ಪ ಮಟ್ಟಿಗೆ ನಡೆದಾಡುತ್ತಿದ್ದ ಆಕೆಗೆ ಇದೀಗ ಸರಿಯಾಗಿ ನಡೆದಾಡಲು ಆಗುತ್ತಿಲ್ಲ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು