ನಾನ್ಯಾರು ಗೊತ್ತಾ?: ಗುರುತು ಹಿಡಿಯದ ಅಧಿಕಾರಿಗೆ ಸಚಿವ ಪ್ರಶ್ನೆ!

Published : Oct 06, 2019, 08:01 AM IST
ನಾನ್ಯಾರು ಗೊತ್ತಾ?: ಗುರುತು ಹಿಡಿಯದ ಅಧಿಕಾರಿಗೆ ಸಚಿವ ಪ್ರಶ್ನೆ!

ಸಾರಾಂಶ

ನಾನ್ಯಾರು ಗೊತ್ತಾ?: ಗುರುತು ಹಿಡಿಯದ ಅಧಿಕಾರಿಗೆ ಸಚಿವ ಪ್ರಶ್ನೆ| ಇಡೀ ರಾಜ್ಯಕ್ಕೆ ನಾನು ಯಾರು ಎಂದು ಗೊತ್ತು. ನಿಮಗೆ ಗೊತ್ತಿಲ್ವಾ? ನಾನು ಯಾರು? ನಾನು ಯಾರು?’

ಯಾದಗಿರಿ[ಅ.06]: ‘ಇಡಿ ರಾಜ್ಯಕ್ಕೆ ನಾನು ಯಾರು ಎಂದು ಗೊತ್ತು. ನಿಮಗೆ ಗೊತ್ತಿಲ್ವಾ? ನಾನು ಯಾರು? ನಾನು ಯಾರು?’

ಇದು ಸಚಿವ ಪ್ರಭು ಚವ್ಹಾಣ್‌ ನಗರದ ಜೆಸ್ಕಾಂ ಕಚೇರಿಗೆ ತೆರಳಿದ್ದ ವೇಳೆ ತನ್ನನ್ನು ಗುರುತು ಹಿಡಿಯದ ಅಧಿಕಾರಿಗೆ ಕೇಳಿದ ಪ್ರಶ್ನೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್‌ ಇವರು ಶನಿವಾರ ನಗರದಲ್ಲಿ ತಹಸೀಲ್ದಾರ್‌ ಕಚೇರಿ, ಬಿಇಒ ಕಚೇರಿ, ಸಬ್‌ ರಿಜಿಸ್ಟ್ರಾರ್‌ ಕಚೇರಿಗಳಿಗೆ ಮಿಂಚಿನ ದಾಳಿ ನಡೆಸಿದರು.

ಜೆಸ್ಕಾಂ ಕಚೇರಿಗೆ ತೆರಳಿದ್ದಾಗ, ಅಲ್ಲಿನ ಅಧಿಕಾರಿಯೊಬ್ಬರು ನೀವು ಯಾರು ಎಂದು ಪ್ರಶ್ನಿಸಿದ್ದಾರೆ. ಈ ವೇಳೆ ಸಚಿವ ಪ್ರಭು ಮತ್ತೇ ಪ್ರಶ್ನೆ ಮಾಡಿದರು. ಆ ವೇಳೆ ಅಧಿಕಾರಿಯಿಂದ ಗೊತ್ತಿಲ್ಲ ಎಂಬ ಉತ್ತರ ಬಂತು. ಇದರಿಂದ ಕೆಂಡಾಮಂಡಲರಾದ ಸಚಿವರು ಅಧಿಕಾರಿಯನ್ನು ಈ ಮೇಲಿನಂತೆ ತರಾಟೆಗೆ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಐಷಾರಾಮಿ ಕಾರ್ಟಿಯರ್ ವಾಚ್‌: ಲೋಕಾಯುಕ್ತ ಅಫಿಡವಿಟ್ ರಿವೀಲ್ ಮಾಡಿದ ಡಿ.ಕೆ. ಶಿವಕುಮಾರ್!
ರಾಯಚೂರು: ರಸ್ತೆಯಲ್ಲಿ ಹೋಗುತ್ತಿದ್ದ ಹಾವು ಹಿಡಿದು ಬೈಕ್ ಸವಾರ ಹುಚ್ಚಾಟ, ವಿಡಿಯೋ ವೈರಲ್