ಏಕರೂಪ ಸಂಹಿತೆ, ತ್ರಿವಳಿ ತಲಾಕ್ ಪ್ರತ್ಯೇಕ ವಿಷಯಗಳು: ವೆಂಕಯ್ಯನಾಯ್ಡು

Published : Oct 14, 2016, 10:39 AM ISTUpdated : Apr 11, 2018, 12:44 PM IST
ಏಕರೂಪ ಸಂಹಿತೆ, ತ್ರಿವಳಿ ತಲಾಕ್ ಪ್ರತ್ಯೇಕ ವಿಷಯಗಳು: ವೆಂಕಯ್ಯನಾಯ್ಡು

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರೀಕ ಸಂಹಿತೆಯನ್ನು ತ್ರಿವಳಿ ತಲಾಖ್ ಜೊತೆ ಬೆಸೆಯಬಾರದು.ಅವೆರಡು ಪ್ರತ್ಯೇಕ ವಿಚಾರಗಳು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನವದೆಹಲಿ (ಅ.14): ಕೇಂದ್ರ ಸರ್ಕಾರ ಜಾರಿಗೆ ತರಲು ಹೊರಟಿರುವ ಸಮಾನ ನಾಗರೀಕ ಸಂಹಿತೆಯನ್ನು ತ್ರಿವಳಿ ತಲಾಖ್ ಜೊತೆ ಬೆಸೆಯಬಾರದು. ಅವೆರಡು ಪ್ರತ್ಯೇಕ ವಿಚಾರಗಳು ಎಂದು ಕೇಂದ್ರದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.

ನಾಗರೀಕ ಸಂಹಿತೆಯ ಬಗ್ಗೆ ನಡೆದ ಗಂಭೀರ ಚರ್ಚೆಯಲ್ಲಿ ಭಾಗವಹಿಸಿದ ವೆಂಕಯ್ಯನಾಯ್ಡು, ಲಿಂಗ ಸಮಾನತೆ ಮತ್ತು ಮಹಿಳಾ ತಾರತಮ್ಯದ ವಿರುದ್ಧ ಹೋರಾಡಲು ನಾಗರೀಕ ಸಂಹಿತೆಯನ್ನು ಜಾರಿಗೆ ತರಲಾಗುತ್ತಿದೆ. ದೇಶದಲ್ಲಿ ತ್ರಿವಳಿ ತಲಾಕ್ (ಟ್ರಿಪಲ್ ತಲಾಕ್) ಬಗ್ಗೆ ಚರ್ಚೆಯಾಗುತ್ತಿದೆ. ಕೆಲವರು ಇವೆರಡೂ ವಿಚಾರವನ್ನು ಒಟ್ಟಿಗೆ ಸೇರಿಸಿ ಗೊಂದಲವುಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ನೀವೂ ಚರ್ಚೆಯಲ್ಲಿ ಭಾಗವಹಿಸಿ. ನಿಮ್ಮ ದೃಷ್ಟಿಕೋನವನ್ನು ನಮ್ಮೊಂದಿಗೆ ಹಂಚಿಕೊಳ್ಳಿ. ಅನಗತ್ಯವಾಗಿ ಪ್ರಧಾನಿ ಮೋದಿಯವರ ಹೆಸರನ್ನು ಯಾಕೆ ಎಳೆದು ಸರ್ವಾಧಿಕಾರಿ ಎಂದು ಬಿಂಬಿಸುತ್ತೀರಿ ಎಂದು ವೆಂಕಯ್ಯನಾಯ್ಡು ಪತ್ರಕರ್ತರಿಗೆ ಸವಾಲೆಸೆದಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ ವಿರೋಧಿ ಬಾಂಗ್ಲಾದೇಶಿ ವಿದ್ಯಾರ್ಥಿ ಯುವ ನಾಯಕ ಉಸ್ಮಾನ್‌
ಅಯ್ಯಪ್ಪನ ಚಿನ್ನ ಎಗರಿಸಿದ ಕೇಸಲ್ಲಿ ಬಳ್ಳಾರಿ ವ್ಯಕ್ತಿ ಸೆರೆ