ರಾಘವಶ್ರೀ ವಿರುದ್ಧ ಹೇಳಿಕೆ ನೀಡದಂತೆ ಇಬ್ಬರಿಗೆ ನಿರ್ದೇಶನ

Published : Sep 24, 2017, 09:21 AM ISTUpdated : Apr 11, 2018, 12:51 PM IST
ರಾಘವಶ್ರೀ ವಿರುದ್ಧ ಹೇಳಿಕೆ ನೀಡದಂತೆ ಇಬ್ಬರಿಗೆ ನಿರ್ದೇಶನ

ಸಾರಾಂಶ

ರಾಮಚಂದ್ರಾಪುರ ಮಠದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ‘ಕನ್ಯಾಸಂಸ್ಕಾರ’ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ತೇಜೋವಧೆ ಮಾಡಬಾರದು ಹಾಗೂ ಜನರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನ ಮಾಡಬಾರದು ಎಂದು ರೇವತಿ ರಾಜ್ ಹಾಗೂ ಆರ್.ಎಂ.ಎನ್.ರಮೇಶ್ ಎಂಬುವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಬೆಂಗಳೂರು: ರಾಮಚಂದ್ರಾಪುರ ಮಠದಲ್ಲಿ ಹೆಣ್ಣು ಮಕ್ಕಳಿಗೆ ನೀಡುವ ‘ಕನ್ಯಾಸಂಸ್ಕಾರ’ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಭಾರತೀ ಸ್ವಾಮೀಜಿಯವರ ತೇಜೋವಧೆ ಮಾಡಬಾರದು ಹಾಗೂ ಜನರ ಧಾರ್ಮಿಕ ನಂಬಿಕೆಗಳನ್ನು ಘಾಸಿಗೊಳಿಸುವ ಪ್ರಯತ್ನ ಮಾಡಬಾರದು ಎಂದು ರೇವತಿ ರಾಜ್ ಹಾಗೂ ಆರ್.ಎಂ.ಎನ್.ರಮೇಶ್ ಎಂಬುವರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಕನ್ಯಾಸಂಸ್ಕಾರದ ಕುರಿತು ಕೀಳುಮಟ್ಟದ ಹೇಳಿಕೆ ನೀಡುವ ಮೂಲಕ ರಾಘವೇಶ್ವರ ಸ್ವಾಮೀಜಿ ಅವರ ತೇಜೋವಧಗೆ ರೇವತಿ ರಾಜ್ ಮತ್ತು ಆರ್.ಎಂ.ಎನ್. ರಮೇಶ್ ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಎನ್. ಆರ್.ಮುಕ್ರಿ, ಮಂಜುಳಾ ಮುಕ್ರಿ ಸೇರಿದಂತೆ ಇತರೆ ಮೂವರು ಬೆಂಗಳೂರಿನ ಹೆಚ್ಚುವರಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಖುದ್ದಾಗಿ ಅಥವಾ ಪ್ರತಿನಿಧಿಗಳ ಮೂಲಕ ಕನ್ಯಾಸಂಸ್ಕಾರದಂತಹ ಧಾರ್ಮಿಕ ಪ್ರಕ್ರಿಯೆ ಕುರಿತು ರಾಮಚಂದ್ರಾಪುರ ಮಠ ಅಥವಾ ರಾಘವೇಶ್ವರ ಭಾರತಿ ಸ್ವಾಮಿ ವಿರುದ್ಧ ಮುದ್ರಣ, ವಿದ್ಯುನ್ಮಾನ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣ ಹಾಗೂ ಸಾರ್ವಜನಿಕ ಸಮಾವೇಶದಲ್ಲಿ ತೇಜೋವಧೆ ಮಾಡುವಂತಹ ಹೇಳಿಕೆ ಹಾಗೂ ಸಂದೇಶ ನೀಡಬಾರದು ಎಂದು ರೇವತಿರಾಜ್, ಆರ್.ಎಂ.ಆರ್.ರಮೇಶ್‌ಗೆ ನಿರ್ದೇಶಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕಲಬುರಗಿ ಉದ್ಯಮಿ ಮನೆಮುಂದೆ ಬೆಂಕಿ ಹಚ್ಚಿಕೊಂಡು ಪ್ರಾಣಬಿಟ್ಟ ಬಿಜೆಪಿ ಕಾರ್ಯಕರ್ತೆ ಜ್ಯೋತಿ ಪಾಟೀಲ್!
ಚಿಕ್ಕೋಡಿ ಶಿಕ್ಷಕಿಯ ಕಣ್ಣೀರು: ಎಸ್‌ಡಿಎಂಸಿ ಅಕ್ರಮ ತಡೆದಿದ್ದಕ್ಕೆ ಅಮಾನತು ಶಿಕ್ಷೆ? ನ್ಯಾಯಕ್ಕಾಗಿ ಕಣ್ಣೀರಿಟ್ಟ ಟೀಚರ್!