ಮೊಮೊ ತಿಂದರೆ ಕ್ಯಾನ್ಸರ್‌ ಬರುತ್ತಾ? ಇದನ್ನು ನಿಷೇಧಿಸಬೇಕಾ?

Published : Jun 24, 2017, 03:18 PM ISTUpdated : Apr 11, 2018, 01:00 PM IST
ಮೊಮೊ ತಿಂದರೆ ಕ್ಯಾನ್ಸರ್‌ ಬರುತ್ತಾ? ಇದನ್ನು ನಿಷೇಧಿಸಬೇಕಾ?

ಸಾರಾಂಶ

ಸಾಧಾರಣವಾಗಿ ದಕ್ಷಿಣ ಭಾರತೀಯರಿಗೆ ಈ ತಿಂಡಿಯ ಹೆಸರು ಅಷ್ಟಾಗಿ ಪರಿಚಯ ಇರಲಿಕ್ಕಿಲ್ಲ. ಆದರೆ, ಉತ್ತರ ಭಾರತೀಯರಿಗೆ ಈ ತಿಂಡಿಯ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯ ಬೀದಿ ಬೀದಿಗಳಲ್ಲಿ ಈ ಖಾದ್ಯವನ್ನು ಮಾರುತ್ತಾರೆ. ಆದರೆ, ಮೊಮೊವನ್ನು ಬಾಯಿಯಲ್ಲಿ ಹಾಕಿಕೊಳ್ಳುವುದಕ್ಕೂ ಮುನ್ನ ಎಚ್ಚರ. ಅದರ ಸೇವನೆಯಿಂದ ಕ್ಯಾನ್ಸರ್‌ ಬರಬಹುದು. ಇಂಥದ್ದೊಂದು ಸುದ್ದಿ ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ.

ಸಾಧಾರಣವಾಗಿ ದಕ್ಷಿಣ ಭಾರತೀಯರಿಗೆ ಈ ತಿಂಡಿಯ ಹೆಸರು ಅಷ್ಟಾಗಿ ಪರಿಚಯ ಇರಲಿಕ್ಕಿಲ್ಲ. ಆದರೆ, ಉತ್ತರ ಭಾರತೀಯರಿಗೆ ಈ ತಿಂಡಿಯ ಹೆಸರು ಕೇಳಿದರೆ ಬಾಯಲ್ಲಿ ನೀರೂರುತ್ತದೆ. ಅದರಲ್ಲೂ ರಾಷ್ಟ್ರ ರಾಜಧಾನಿ ದೆಹಲಿಯ ಬೀದಿ ಬೀದಿಗಳಲ್ಲಿ ಈ ಖಾದ್ಯವನ್ನು ಮಾರುತ್ತಾರೆ. ಆದರೆ, ಮೊಮೊವನ್ನು ಬಾಯಿಯಲ್ಲಿ ಹಾಕಿಕೊಳ್ಳುವುದಕ್ಕೂ ಮುನ್ನ ಎಚ್ಚರ. ಅದರ ಸೇವನೆಯಿಂದ ಕ್ಯಾನ್ಸರ್‌ ಬರಬಹುದು. ಇಂಥದ್ದೊಂದು ಸುದ್ದಿ ಇದೀಗ ಜನರನ್ನು ಬೆಚ್ಚಿ ಬೀಳಿಸಿದೆ.

ಜಮ್ಮು- ಕಾಶ್ಮೀರದ ಬಿಜೆಪಿ ರಾಜ್ಯಸಭಾ ಸದಸ್ಯ ರಮೇಶ್‌ ಅರೋರಾ ಅವರು, ಮೊಮೊಗಳಲ್ಲಿ ಆರೋಗ್ಯಕ್ಕೆ ಹಾನಿಕಾರಕ ಮೋನೊ​ಸೋಡಿಯಂ ಗ್ಲುಟಮೇನ್‌ (ಎಂಎಸ್‌ಜಿ)ಅಂಶ ಅಧಿಕ​ವಾಗಿದೆ. ಹೀಗಾಗಿ ಬೀದಿ ಬದಿಗೆ ಮೊಮೊ ತಿಂಡಿಗಳನ್ನು ಮಾರುವುದನ್ನು ನಿಷೇಧಿಸಬೇಕು ಎಂದು ಒತ್ತಾಯಿಸಿ​ದ್ದಾ​ರೆ.

ಮೋನೊಸೋಡಿಯಂ ಗ್ಲುಟಮೇನ್‌ ಅನ್ನು ಅಜ್ನಿಮೋಟೋ ಎಂದು ಸಾಮಾನ್ಯವಾಗಿ ಕರೆಯುತ್ತಾರೆ. ಎಲ್ಲಾ ಚೀನಿ ಖಾದ್ಯಗಳಲ್ಲಿಯೂ ಇದನ್ನು ಸೇರಿಸಲಾಗುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ ಅಂಶಗಳು ಅಡಗಿರುತ್ತವೆ. ಅವುಗಳ ಸೇವನೆ ಕ್ಯಾನ್ಸರ್‌ಗೂ ಕಾರಣವಾಗ​ಬಲ್ಲದು ಎಂದು ಅರೋರಾ ಹೇಳಿದ್ದರು. ಈ ಸುದ್ದಿ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಆದರೆ, ಈ ವದಂತಿಯನ್ನು ಬೆನ್ನತ್ತಿ ಹೊರಟ ಸಂದರ್ಭದಲ್ಲಿ ಮೊಮೊ ಖಾದ್ಯದಲ್ಲಿ ಎಂಎಸ್‌ಜಿ ಅಂಶ ಕಡಿಮೆ ಪ್ರಮಾಣ​ದ​ಲ್ಲಿ​ದ್ದು, ಅದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಇಲ್ಲ ಎಂಬ ಸಂಗತಿ ತಿಳಿದು ಬಂದಿದೆ. ದೆಹಲಿಯ ಗಂಗಾರಾಮ್‌ ಆಸ್ಪತ್ರೆಯ ವೈದ್ಯ ನರೇಂದ್ರ ಬನ್ಸಲ್‌ ಅವರನ್ನು ಈ ಬಗ್ಗೆ ಪ್ರಶ್ನೆ ಕೇಳಿದಾಗ, ಅಜ್ನಿ​ಮೋಟೋ ಅಥವಾ ಎಂಎಸ್‌ಜಿಯಲ್ಲಿ ಹೆಚ್ಚಿನ ಸೋಡಿಯಂ ಅಂಶವಿದೆ. ರಕ್ತದ ಒತ್ತಡ, ಹೃದ್ರೋಗಿಗಳು ಇದನ್ನು ತಿನ್ನುವುದು ಸೂಕ್ತವಲ್ಲ. ಆದರೆ, ಅದರಿಂದ ಕ್ಯಾನ್ಸರ್‌ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇರಳದಲ್ಲಿ ಉತ್ತರ ಭಾರತದ ಕಾರ್ಮಿಕನ ಮೇಲೆ ಗುಂಪು ಹತ್ಯೆ, 'ಆತನ ದೇಹದ ಮೇಲೆ ಗಾಯವಾಗದ ಪಾರ್ಟ್‌ಗಳೇ ಇಲ್ಲ' ಎಂದ ವೈದ್ಯರು!
ಅಂತರಾಷ್ಟ್ರೀಯ ವೇದಿಕೆಯಲ್ಲಿ ಕನ್ನಡದ ಡಿಂಡಿಮ: ವಿದೇಶಿ ಕಲಾಪ್ರೇಮಿಗಳ ಮನಗೆದ್ದ ಈ ಕನ್ನಡ ಕ್ಯಾಲಿಗ್ರಫಿ ಸಾಧಕ ಯಾರು?