ಹಿಂದೊಮ್ಮೆ ಪಕ್ಷ ಕಟ್ಟಿ ಬಿಜೆಪಿ ಸೋಲಿಸಲು ರಾಮುಲು ಹೊರಟಿದ್ದರು. ಅವರನ್ನು ನಾವು ಸೋಲಿಸಲಿಕ್ಕಾಗುತ್ತದೆಯೇ? ನನಗೆ ವರ್ಚಸ್ಸು ಇಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್ ಶ್ರೀರಾಮುಲು ಬಗ್ಗೆ ವ್ಯಂಗ್ಯವಾಡಿದ್ದಾರೆ.
ಹೊಸಪೇಟೆ/ಚಿತ್ರದುರ್ಗ: 8 ಸಚಿವರು, 60 ಶಾಸಕರು ಬಳ್ಳಾರಿಗೆ ಬರುತ್ತಾ ರಂತೆ. ಇಡೀ ಸರ್ಕಾರವೇ ಇಲ್ಲಿ ಬಂದು ಕುಳಿತುಕೊಳ್ಳಲಿ.
ನಮ್ಮ ಕತ್ತು ತೋರಿಸುತ್ತೇವೆ ಎಂದು ಬಿಜೆಪಿ ನಾಯಕ ಶ್ರೀರಾಮುಲು ಹೊಸಪೇಟೆಯಲ್ಲಿ ಸವಾಲು ಹಾಕಿದ್ದಾರೆ.
ಇದಕ್ಕೆ ತಿರುಗೇಟು ನೀಡಿರುವ ಸಚಿವ ಡಿ.ಕೆ. ಶಿವಕುಮಾರ್, ಹಿಂದೊಮ್ಮೆ ಪಕ್ಷ ಕಟ್ಟಿ ಬಿಜೆಪಿ ಸೋಲಿಸಲು ರಾಮುಲು ಹೊರಟಿದ್ದರು. ಅವರನ್ನು ನಾವು ಸೋಲಿಸಲಿಕ್ಕಾಗುತ್ತದೆಯೇ? ನನಗೆ ವರ್ಚಸ್ಸು ಇಲ್ಲ ಎಂದು ಚಿತ್ರದುರ್ಗದಲ್ಲಿ ವ್ಯಂಗ್ಯವಾಡಿದ್ದಾರೆ.