ಡಿಕೆಶಿಗೆ ತಪ್ಪದ ಐಟಿ ಕಾಟ, ಹೈಕೋರ್ಟ್ ಗೆ ಚೆಂಡು

By Web DeskFirst Published Mar 8, 2019, 10:49 PM IST
Highlights

ಒಂದು ಕಡೆ ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಆದರೆ ರಾಜ್ಯದ ಜಲಸಂಪನ್ಮೂಲ ಸಚಿವರಿಗೆ ಮಾತ್ರ ನಿರಾಳತೆ ಇಲ್ಲ.

ಬೆಂಗಳೂರು[ಮಾ. 08] ಸಚಿವ ಡಿ.ಕೆ.ಶಿವಕುಮಾರ್  ಮೇಲೆ ಆದಾಯ ತೆರಿಗೆ ದಾಳಿಗೆ ಸಂಬಂಧಿಸಿ ಆದಾಯ ತೆರಿಗೆ ಇಲಾಖೆ ಮತ್ತೊಂದು ಹೆಜ್ಜೆ ಇಟ್ಟಿದೆ.

ಡಿಕೆ ಶಿವಕುಮಾರ್ ನಿವಾಸಗಳ ಮೇಲೆ ಐಟಿ ದಾಳಿ ಪ್ರಕರಣದ ಮೇಲಿನ ಆರೋಪ ಕೈಬಿಟ್ಟ ಸಂಸದರು, ಶಾಸಕರ ವಿಶೇಷ ಕೋರ್ಟ್ ಅದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ.

ಹೈಕೋರ್ಟ್ ಗೆ ಅರ್ಜಿ ಆದಾಯ ತೆರಿಗೆ ಇಲಾಖೆ ಅರ್ಜಿ ಸಲ್ಲಿಸಿದ್ದು ಕೆಳ ನ್ಯಾಯಾಲಯದ ಆದೇಶ ರದ್ದುಪಡಿಸಲು ಮನವಿ ಮಾಡಲಾಗಿದೆ. ಮೂರೂ ಪ್ರಕರಣಗಳ ವಿಚಾರಣೆ  ಮುಂದುವರಿಕೆಗೆ ಮನವಿ ಮಾಡಲಾಗಿದ್ದು  ಐಟಿ ಇಲಾಖೆ ವಕೀಲ ಜೀವನ್ ನೀರಳಗಿ ಅರ್ಜಿ ಸಲ್ಲಿಸಿದ್ದಾರೆ.

click me!