ಡಿಕೆ ಶಿವಕುಮಾರ್'ಗೆ ಶುರುವಾಯ್ತಾ ಶುಕ್ರದೆಸೆ?

Published : Aug 09, 2017, 07:45 AM ISTUpdated : Apr 11, 2018, 01:12 PM IST
ಡಿಕೆ ಶಿವಕುಮಾರ್'ಗೆ ಶುರುವಾಯ್ತಾ ಶುಕ್ರದೆಸೆ?

ಸಾರಾಂಶ

ರಾಜಕೀಯ ಜಿದ್ದಾಜಿದ್ದಿಯಲ್ಲಿ ಕೊನೆಗೂ ಸೋನಿಯಾ ಗಾಂಧಿ ಆಪ್ತ ಅಹ್ಮದ್​ ಪಟೇಲ್ ಗೆಲುವು ಸಾಧಿಸಿದ್ದಾರೆ. ಮ್ಯಾಜಿಕ್​ ಸಂಖ್ಯೆ 44 ಮತಗಳನ್ನು ಪಡೆಯುವ ಮೂಲಕ ಅಹಮದ್​ ಪಟೇಲ್ ರಾಜ್ಯಸಭೆ ಪ್ರವೇಶಿಸಿದ್ದಾರೆ. ಅಹಮದ್​ ಪಟೇಲ್ ಗೆಲುವಿಗೆ ಗುಜರಾತ್​ ಕೈ ಶಾಸಕರ ಪರಿಶ್ರಮ ಎಷ್ಟು ಮುಖ್ಯವೋ ಅಷ್ಟೇ ಮಹತ್ತರ  ಪಾತ್ರವನ್ನು  ಕರ್ನಾಟಕದ ಇಂಧನ ಸಚಿವ ಡಿ.ಕೆ. ಶಿವಕುಮಾರ್​ ವಹಿಸಿದ್ದಾರೆ.

ಬೆಂಗಳೂರು(ಆ. 9): ತಮ್ಮ ಮೇಲಿನ ಐಟಿ ದಾಳಿಯನ್ನು ಲೆಕ್ಕಿಸದೆ ಗುಜರಾತ್ ಕಾಂಗ್ರೆಸ್​ ಶಾಸಕರ ಕುದುರೆ ವ್ಯಾಪಾರವನ್ನು ತಪ್ಪಿಸಿ ಅವರಿಗೆ ರಕ್ಷಣೆ ನೀಡಿದವರು ಡಿ.ಕೆ.ಶಿವಕುಮಾರ್.  ಎಲ್ಲಾ  44 ಶಾಸಕರನ್ನು ಬೆಂಗಳೂರಿನ ಬಿಡದಿ ಬಳಿಯ ಈಗಲ್​'ಟನ್​ ರೆಸಾರ್ಟ್'​ನಲ್ಲಿ  ಇರಿಸಿದ್ದರು. ಇದು ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತ್ತು.

ಡಿಕೆಶಿಗೆ ಏನು ಲಾಭ?
ಅಹಮದ್​ ಪಟೇಲ್ ಗೆಲುವಿನ  ಹಿಂದೆ ಡಿ.ಕೆ.ಶಿವಕುಮಾರ್'ಗೆ ಲಾಭವೂ ಇದೆ. ಈ ಗೆಲುವು ಡಿ.ಕೆ.ಶಿವಕುಮಾರ್​ಗೆ ಹೈಕಮಾಂಡ್​ ಮಟ್ಟದಲ್ಲಿ ಪ್ರಭಾವ ಹೆಚ್ಚಿಸುತ್ತೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಮೇಲೆ ಐಟಿ ದಾಳಿ ನಡೆದರೂ ಕಷ್ಟಕಾಲದಲ್ಲಿ ಜೊತೆಗೆ ನಿಂತ ಎಂಬ ಹೆಗ್ಗಳಿಗೆ  ಪಾತ್ರವಾಗಬಹುದು. ಇದಲ್ಲದೆ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್​ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಪ್ರಮುಖ ಪಾತ್ರವನ್ನು ನಿರ್ವಹಿಸಬಹುದು.

ಜೊತೆಗೆ ರಾಜ್ಯಮಟ್ಟದಲ್ಲೂ ಡಿ.ಕೆ.ಶಿವಕುಮಾರ್​ ಪ್ರಬಲ ನಾಯಕರಾಗಿ ಹೊರಹೊಮ್ಮುವ ಸಾಧ್ಯತೆಯಿದೆ. ಏಕೆಂದ್ರೆ ಇತ್ತೀಚಿಗೆ ನಡೆದ ನಂಜನಗೂಡು ಮತ್ತು ಗುಂಡ್ಲುಪೇಟೆ ಉಪಚುನಾವಣೆಯಲ್ಲಿ ಕಾಂಗ್ರೆಸ್​ ಗೆಲುವಿಗೆ ಡಿ.ಕೆ. ಶಿವಕುಮಾರ್​ ಪ್ರಮುಖ ಪಾತ್ರವಹಿಸಿದ್ದರು.  ಇದೀಗ ಅಹಮದ್​ ಪಟೇಲ್​ ಗೆಲುವಿನ ಹಿಂದೆಯೂ ಡಿ.ಕೆ. ಶಿವಕುಮಾರ್​ ಕೈ ಕೆಲಸ ಮಾಡಿರುವುದು ರಾಜ್ಯನಾಯಕರಲ್ಲಿ ಡಿ.ಕೆ.ಶಿವಕುಮಾರ್​ ಮೇಲೆ ಮತ್ತಷ್ಟು ವಿಶ್ವಾಸ ಹೆಚ್ಚಿಸಿದೆ. ಇದಲ್ಲದೆ, ಐಟಿ ದಾಳಿಯಿಂದ ಕಳಂಕ ಹೊತ್ತು ಪಕ್ಷದಲ್ಲೇ ಟೀಕೆಗೆ ಗುರಿಯಾಗಿದ್ದ ಡಿ.ಕೆ. ಶಿವಕುಮಾರ್ ತಮ್ಮನ್ನು ಸಮರ್ಥಿಸಿಕೊಳ್ಳಲು ಈ ಗೆಲುವು ಒಂದು ಅಸ್ತ್ರವಾಗಿದೆ.

ಒಟ್ಟಿನಲ್ಲಿ ಅಹಮದ್​ ಪಟೇಲ್ ಗೆಲುವು ಇಂಧನ  ಸಚಿವ  ಡಿ.ಕೆ.ಶಿವಕುಮಾರ್'​ಗೆ ದೊಡ್ಡ ಜಯ ಎಂದೇ ಹೇಳಬಹುದು. ಅಷ್ಟೇ ಅಲ್ಲ ತಮ್ಮ ರಾಜಕೀಯ ಎದುರಾಳಿ ಬಿಜೆಪಿಗೆ ಈ ಮೂಲಕ ತಿರುಗೇಟನ್ನು ಡಿ.ಕೆ.ಶಿವಕುಮಾರ್​ ನೀಡಿದ್ದಾರೆ.  ಮುಂದಿನ ದಿನಗಳಲ್ಲಿ ಪಕ್ಷದಲ್ಲಿ ಡಿಕೆಶಿ ಪ್ರಾಬಲ್ಯ ಎಷ್ಟರ ಮಟ್ಟಿಗೆ ಪ್ರಭಾವ ಬೀರುತ್ತೆ ಅನ್ನೋದನ್ನು ಕಾದು ನೋಡಬೇಕಿದೆ.

- ಬ್ಯೂರೋ ರಿಪೋರ್ಟ್,​ ಸುವರ್ಣನ್ಯೂಸ್

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಹಸ್ಯ ಡಿನ್ನರ್ ಮೀಟಿಂಗ್‌ನಲ್ಲಿ 'ಅಹಿಂದ' ಮಾಸ್ಟರ್ ಪ್ಲಾನ್! ಸಿಎಂ ಕುರ್ಚಿ ಉಳಿಸಿಕೊಳ್ಳಲು ಬೆಳಗಾವಿಯಲ್ಲಿ ಹೊಸ ರಣತಂತ್ರ?
India News Live: ಅಣುವಲಯ ಇನ್ನು ಖಾಸಗಿಗೂ ಮುಕ್ತ : ‘ಶಾಂತಿ’ ಮಸೂದೆಗೆ ಅನುಮೋದನೆ