ಸರ್ಕಾರ ಉಳಿಸದಿದ್ರೆ....ಡಿಕೆಶಿ ಧಮ್ಕಿ ಮುಂಬೈಗೆ ಕೇಳಿಸದಿದ್ರೆ?

Published : Jul 14, 2019, 06:42 PM IST
ಸರ್ಕಾರ ಉಳಿಸದಿದ್ರೆ....ಡಿಕೆಶಿ ಧಮ್ಕಿ ಮುಂಬೈಗೆ ಕೇಳಿಸದಿದ್ರೆ?

ಸಾರಾಂಶ

ಅತೃಪ್ತ ಶಾಸಕರ ಮೇಲೆ ಡಿಕೆಶಿಗೆ ಇನ್ನೂ ಇದೆ ನಂಬಿಕೆ| ಅವರೆಲ್ಲಾ ನೈಜ ಕಾಂಗ್ರೆಸ್ಸಿಗರು ಎಂದ ಟ್ರಬಲ್ ಶೂಟರ್| ‘ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ’| ಅತೃಪ್ತರು ಸರ್ಕಾರ ಉಳಿಸಲಿದ್ದಾರೆ ಎಂದ ಡಿಕೆ ಶಿವಕುಮಾರ್| ವಿಪ್ ಉಲ್ಲಂಘಿಸಿದರೆ ಅನರ್ಹತೆ ಎಂದು ಎಚ್ಚರಿಸಿದ ಡಿಕೆಶಿ|

ಬೆಂಗಳೂರು(ಜು.14): ವಿಶ್ವಾಸಮತ ಯಾಚನೆ ವೇಳೆ ಅತೃಪ್ತ ಶಾಸಕರು ಸರ್ಕಾರದ ಪರ ಮತ ಚಲಾಯಿಸಲಿದ್ದಾರೆ ಎಂದು ಸಚಿವ ಡಿ.ಕೆ.ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮಾತನಾಡಿರುವ ಸಚಿವ ಡಿಕೆಶಿ, ಮುಂಬೈನಲ್ಲಿರುವ ಅತೃಪ್ತ ಶಾಸಕರು ನೈಜ ಕಾಂಗ್ರೆಸ್ಸಿಗರಾಗಿದ್ದು ತಮ್ಮ ಕ್ಷೇತ್ರದಲ್ಲಿ ಗೆಲುವಿಗಾಗಿ ಹುಲಿಯಂತೆ ಕಾದಾಡಿದ್ದಾರೆ ಎಂದು ಹೇಳಿದ್ದಾರೆ.

ಅತೃಪ್ತ ಶಾಸಕರು ಶೀಘ್ರದಲ್ಲೇ ಮರಳಲಿದ್ದು, ಸಮ್ಮಿಶ್ರ ಸರ್ಕಾರವನ್ನು ಉಳಿಸುವ ಕೆಲಸ ಮಾಡಲಿದ್ದಾರೆ ಎಂದು ಡಿಕೆಶಿ ಭರವಸೆ ವ್ಯಕ್ತಪಡಿಸಿದ್ದಾರೆ.

ಈ ಮಧ್ಯೆ ಅತೃಪ್ತ ಶಾಸಕರಿಗೆ ಎಚ್ಚರಿಕೆಯನ್ನೂ ನೀಡಿರುವ ಡಿಕೆಶಿ, ಕಾಂಗ್ರೆಸ್ ತನ್ನೆಲ್ಲಾ ಶಾಸಕರಿಗೂ ವಿಪ್ ಜಾರಿ ಮಾಡಿದ್ದು ಒಂದು ವೇಳೆ ಯಾರಾದರೂ ಸರ್ಕಾರದ ವಿರುದ್ಧ ಮತ ಚಲಾಯಿಸಿದರೆ ಅವರ ಶಾಸಕತ್ವ ಅನರ್ಹಗೊಳ್ಳಲಿದೆ ಎಂದು ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುನೆಸ್ಕೋ ಪರಂಪರೆ ಪಟ್ಟಿಗೆ ದೀಪಾವಳಿ ಸೇರ್ಪಡೆ!
ಗೃಹ ಸಚಿವ ಅಮಿತ್‌ ಶಾ - ರಾಹುಲ್ ಗಾಂಧಿ ಮತಚೋರಿ ಸಮರ