ಪಿಯೂಷ್ ಗೋಯೆಲ್ ಮಾತಿನಲ್ಲಿ ಹುರುಳಿಲ್ಲ: ಡಿಕೆಶಿ

Published : Jan 05, 2018, 11:26 AM ISTUpdated : Apr 11, 2018, 01:11 PM IST
ಪಿಯೂಷ್ ಗೋಯೆಲ್ ಮಾತಿನಲ್ಲಿ ಹುರುಳಿಲ್ಲ: ಡಿಕೆಶಿ

ಸಾರಾಂಶ

ಕೇಂದ್ರಕ್ಕೆ 55 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆದರೆ 44 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಇನ್ನೂ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನಮಗೆ ಹಂಚಿಕೆಯಾಗಬೇಕು ಎಂದು ವಿವರಿಸಿದರು.

ಬೆಂಗಳೂರು(ಜ.05): ಕಲ್ಲಿದ್ದಲು ಪೂರೈಕೆ ಚರ್ಚೆ ವಿಚಾರವಾಗಿ ಕರ್ನಾಟಕ ಇಂಧನ ಮಂತ್ರಿ ತಮ್ಮೊಂದಿಗೆ ಯಾವುದೇ ಮಾತುಕತೆ ನಡೆಸಿಲ್ಲ ಎಂಬ ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯೆಲ್ ಹೇಳಿಕೆ ಸುಳ್ಳು ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.

ನಮಗೆ ರಾಜಕಾರಣ ಮಾಡಲು ಬರುವುದಿಲ್ಲ. ನಾವು ಪ್ರತಿ ಹಂತದಲ್ಲೂ ಸಮನ್ವಯತೆ ಕಾಯ್ದುಕೊಂಡಿದ್ದೇವೆ. ಕಲ್ಲಿದ್ದಲು ಪೂರೈಕೆ ರದ್ದಾದ ಬಳಿಕ ನಮ್ಮ ಸಂಸತ್ ಸದಸ್ಯರನ್ನು ಕರೆದು ಚರ್ಚಿಸಲಾಗಿದೆ. ರಾಜ್ಯದ ಹಿತದೃಷ್ಟಿಯಿಂದ ಗೋಯೆಲ್ ಅವರಿಗೆ ಮತ್ತೊಮ್ಮೆ ಪತ್ರ ಬರೆಯುತ್ತೇನೆ ಎಂದು ಹೇಳಿದ್ದಾರೆ.

ಮಹರಾಷ್ಟ್ರದ ಒತ್ತಡದಿಂದಾಗಿ ಕಲ್ಲಿದ್ದಲು ಘಟಕ ಒಪ್ಪಂದ ರದ್ದು ಮಾಡೋ ನೋಟೀಸ್ ಕೇಂದ್ರದಿಂದ ಬಂದಿದೆ. ಕಲ್ಲಿದ್ದಲು ಪೂರೈಕೆ ವಿಚಾರವಾಗಿ ಕೇಂದ್ರದ ಜೊತೆ ಹಲವು ಬಾರಿ ಚರ್ಚಿಸಿದ್ದೇನೆ ಎಂದಿದ್ದಾರೆ. ನಮ್ಮ ಇಲಾಖೆ ವತಿಯಿಂದ ಇದುವರೆಗೂ 55 ಮನವಿಯನ್ನು ಸಲ್ಲಿಸಲಾಗಿದೆ. ಕೇಂದ್ರಕ್ಕೆ 55 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನೀಡಬೇಕೆಂದು ಮನವಿ ಮಾಡಿಕೊಂಡಿದ್ದೆವು. ಆದರೆ 44 ಲಕ್ಷ ಮೆಟ್ರಿಕ್ ಟನ್ ಕೊಟ್ಟಿದ್ದಾರೆ. ಇನ್ನೂ 10 ಲಕ್ಷ ಮೆಟ್ರಿಕ್ ಟನ್ ಕಲ್ಲಿದ್ದಲು ನಮಗೆ ಹಂಚಿಕೆಯಾಗಬೇಕು ಎಂದು ವಿವರಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಕೇವಲ 2 ನಿಮಿಷ ಮಗಳ ನೋಡಲು 11ಗಂಟೆಗೆ ಸ್ಟೇಶನ್‌ಗೆ ಬಂದ ತಂದೆ, ಭಾವುಕ ಕ್ಷಣದ ವಿಡಿಯೋ
ಬೀದಿಯಲ್ಲಿ ಬಿದ್ದಿದ್ದ ಕಲ್ಲಿಂದ ಹಣ ಮಾಡೋದು ಹೇಗೆ ಎಂದು ತೋರಿಸಿಕೊಟ್ಟ ಹುಡುಗ: ವೀಡಿಯೋ ಭಾರಿ ವೈರಲ್