
ನವದೆಹಲಿ (ಡಿ.25): ಇ-ಪಾವತಿಯನ್ನು ಪ್ರೋತ್ಸಾಹಿಸಲು ಕೇಂದ್ರ ಸರ್ಕಾರ ರೂಪಿಸಿರುವ ‘ಲಕ್ಕಿ ಗ್ರಾಹಕ ಯೋಜನೆ’ ಮತ್ತು ‘ಡಿಜಿ–ಧನ ವ್ಯಾಪಾರ ಯೋಜನೆ’ಗಳಿಗೆ ಇಂದು ಚಾಲನೆ ಸಿಗಲಿದೆ.
ಲಕ್ಕಿ ಗ್ರಾಹಕ ಯೋಜನೆ ಅಡಿಯಲ್ಲಿ ಆಯ್ಕೆಯಾದವರಿಗೆ ₹ 1,000ದಿಂದ ₹ 15 ಸಾವಿರದವರೆಗೆ ಬಹುಮಾನ ಸಿಗಲಿದೆ.
ಈ ಯೋಜನೆ ಅಡಿ ಪ್ರತಿದಿನ ಅದೃಷ್ಟಶಾಲಿ ಗ್ರಾಹಕರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ. ಅಲ್ಲದೆ ವಾರದಲ್ಲಿ ಒಮ್ಮೆ ವಿಶೇಷ ಲಾಟರಿ ಮೂಲಕವೂ ಅದೃಷ್ಟಶಾಲಿ ಗ್ರಾಹಕರನ್ನು ಆಯ್ಕೆ ಮಾಡಲಾಗುತ್ತದೆ.
ಡಿಜಿ ಧನ ವ್ಯಾಪಾರ ಯೋಜನೆಯಡಿ ವಾರಕ್ಕೆ ಒಮ್ಮೆ ವ್ಯಾಪಾರಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಈ ಯೋಜನೆ ಮುಂದಿನ 100 ದಿನ ಜಾರಿಯಲ್ಲಿರಲಿದೆ. 2017ರ ಏ.14ರಂದು ಬಂಪರ್ ವಿಜೇತರನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗುತ್ತದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.