ಮಹಾನಗರ ಪಾಲಿಕೆಗೆ ಸೂಪರ್‌ ಸೀಡ್‌ ಆತಂಕ, ಎಂಇಎಸ್ ನಲ್ಲಿ ಬಿರುಕು

Published : Nov 25, 2016, 11:58 AM ISTUpdated : Apr 11, 2018, 12:46 PM IST
ಮಹಾನಗರ ಪಾಲಿಕೆಗೆ ಸೂಪರ್‌ ಸೀಡ್‌ ಆತಂಕ, ಎಂಇಎಸ್ ನಲ್ಲಿ ಬಿರುಕು

ಸಾರಾಂಶ

ನ. 01 ರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್‌ನ ಮುಖಂಡರಿಗೆ ಕೊನೆಗೂ ಬುದ್ಧಿ ಬಂದಿದೆ. ಮಹಾನಗರ ಪಾಲಿಕೆ ಸೂಪರ್‌ ಸೀಡ್‌ ಆಗುತ್ತದೆ ಎನ್ನುವ ಭಯ ಕಾಡುತ್ತಿದ್ದು, ಎಂಇಎಸ್‌ನಲ್ಲೇ ಈಗ ಬಿರುಕು ಮೂಡಿದೆ.

ಬೆಳಗಾವಿ (ನ.25): ನ. 01 ರ ಕನ್ನಡ ರಾಜ್ಯೋತ್ಸವದಂದು ಕರಾಳ ದಿನ ಆಚರಿಸಿ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದ ಎಂಇಎಸ್‌ನ ಮುಖಂಡರಿಗೆ ಕೊನೆಗೂ ಬುದ್ಧಿ ಬಂದಿದೆ. ಮಹಾನಗರ ಪಾಲಿಕೆ ಸೂಪರ್‌ ಸೀಡ್‌ ಆಗುತ್ತದೆ ಎನ್ನುವ ಭಯ ಕಾಡುತ್ತಿದ್ದು, ಎಂಇಎಸ್‌ನಲ್ಲೇ ಈಗ ಬಿರುಕು ಮೂಡಿದೆ.

ಮೇಯರ್‌-ಉಪಮೇಯರ್ ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ನಂತರ ಎಂಇಎಸ್‌ನಲ್ಲಿ ಬಿರುಕು ಕಂಡು ಬಂದಿದೆ. ಸೂಪರ್ ಸೀಡ್ ಆದರೆ ಮತ್ತೆ ಚುನಾವಣೆಗೆಯಾಗುವ ಭಯದಿಂದ ಮಾಜಿ ಸಚಿವ ಸತೀಶ್ ಜಾರಕಿಹೋಳಿ ಅವರನ್ನು ಎಂಇಎಸ್‌ನ 14 ಜನ ಮುಖಂಡರು ಭೇಟಿಯಾಗಿದ್ದಾರೆ. ಇಲ್ಲಿನ ಜಾಧವ ನಗರದ ಸತೀಶ್ ಜಾರಕಿಹೊಳಿ ನಿವಾಸದಲ್ಲಿ ಮಾಜಿ ಉಪಮೇಯರ್ ಮಿನಾವಾಜ್, ನಾಗೇಶ ಮಂಡೋಳ್ಕರ್, ವಿನಾಯಕ ಗುಂಜಟಕರ್ ನೇತೃತ್ವದಲ್ಲಿ ಇತರ ಸದಸ್ಯರು ಭೇಟಿಯಾಗಿದ್ದಾರೆ. ಮಹಾನಗರ ಪಾಲಿಕೆಯ ಎಂಇಎಸ್ ಸದಸ್ಯರಲ್ಲಿ ಬಿರುಕು ಉಂಟಾಗಿದ್ದು, ಕನ್ನಡ ಸದಸ್ಯರ ಗುಂಪಿಗೆ ಸೇರಲು 14 ಜನ ಎಂಇಎಸ್ ಸದಸ್ಯರು ಸಿದ್ಧರಾಗಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆ ಸೂಪರ್ ಸೀಡ್ ಆಗದಿದ್ದರೆ, ಕನ್ನಡ ಸದಸ್ಯರ ಜೊತೆಗೆ ‌ಅಧಿಕಾರ ಹಂಚಿಕೊಳ್ಳುವ ಕುರಿತು ಮಾಜಿ ಸಚಿವ ಸತೀಶ್‌ ಜಾರಕಿಹೊಳಿ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಇನ್ನು ಕರಾಳ ದಿನಾಚರಣೆಯಲ್ಲಿ ಭಾಗಿಯಾದವರ ವಿರುದ್ಧವಷ್ಟೇ ಕ್ರಮಕ್ಕೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದು ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುಪಿಎಸ್‌ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
ಜಾಗತಿಕ ಶಾಂತಿ-ಸೌಹಾರ್ದತೆಗೆ ಧ್ಯಾನವೇ ಮಾರ್ಗ: ವಿಶ್ವಸಂಸ್ಥೆಯಲ್ಲಿ ರವಿಶಂಕರ್ ಗುರೂಜಿ ಸಂದೇಶ