ಕನಸಲ್ಲಿ ದೇವಿ ಬಂದಳೆಂದು ಗುಂಡಿಯಲ್ಲಿ ಕುಳಿತ ಭಕ್ತ!

Published : Dec 06, 2017, 05:54 PM ISTUpdated : Apr 11, 2018, 12:40 PM IST
ಕನಸಲ್ಲಿ ದೇವಿ ಬಂದಳೆಂದು ಗುಂಡಿಯಲ್ಲಿ ಕುಳಿತ ಭಕ್ತ!

ಸಾರಾಂಶ

ತಾಲೂಕಿನ ಕರಿಬಸಮ್ಮ  ದೇವಿಯ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತ ಅನುಷ್ಠಾನಕ್ಕೆ ಕುಳಿತಿದ್ದಾನೆ.

ಕಲಬುರಗಿ (ಡಿ.06): ತಾಲೂಕಿನ ಕರಿಬಸಮ್ಮ  ದೇವಿಯ ದೇವಸ್ಥಾನದ ಮುಂಭಾಗದಲ್ಲಿ ವಿಜಯಕುಮಾರ್ ಪವಾರ್ ಎಂಬ ಭಕ್ತ ಅನುಷ್ಠಾನಕ್ಕೆ ಕುಳಿತಿದ್ದಾನೆ.

ದೇವಿ ಕನಸಿನಲ್ಲಿ ಬಂದು ಹೇಳಿದ್ದಾರೆ ಅನ್ನೋ ಕಾರಣಕ್ಕೆ ನಿನ್ನೆ ಸಂಜೆ 5 ಗಂಟೆಗೆ ನಾಲ್ಕು ಅಡಿ ತಗ್ಗು ತೆಗೆದು ಅದರಲ್ಲಿ ವಿಜಯಕುಮಾರ್ ಕುಳಿತಿದ್ದಾರೆ. ಅವರಿಗೆ  ವಿಭೂತಿ, ಕುಂಕುಮ, ಭಂಡಾರ ಹಾಕಿ ತಲೆಯವರೆಗೂ ಮಣ್ಣು ಮುಚ್ಚಿ ಆನಂತರ ಅರ್ಧ ಭೂ ಒಳಭಾಗದಿಂದ ಹಿಡಿದು ಮೇಲ್ಭಾಗ ನಾಲ್ಕು ಅಡಿವರೆಗೂ ಬೇವಿನ ತಪ್ಪಲಿನಿಂದ ಮುಚ್ಚಿದ್ದಾರೆ.  ಇನ್ನು ನಾಳೆ ಬೆಳಗ್ಗೆ 10.10ಕ್ಕೆ ಇವರ ಅನುಷ್ಠಾನ ಮುಗಿಯಲಿದ್ದು ಅದ್ದೂರಿಯಾಗಿ ಅವರನ್ನ ಭೂಮಿಯ ಆಳದಿಂದ ಹೊರ ತೆಗೆಯಲಿದ್ದಾರೆ. ವಿಜಯಕುಮಾರ್ ಕಲಬುರಗಿಯ ನಂದಿಕೂರ್ ಗ್ರಾಮದ ನಿವಾಸಿಯಾಗಿದ್ದು, ಕಟ್ಟಡಗಳ ಕಾಂಟ್ರಾಕ್ಟರ್ ಆಗಿ ಕೆಲಸ‌ ಮಾಡುತ್ತಿದ್ದ. ಅವನಿಗೆ ಮದುವೆಯಾಗಿ ಎರಡು ಮಕ್ಕಳು ಕೂಡ ಇದ್ದಾರೆ.  

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮಾಲೀಕನ ನಿಧನಕ್ಕೆ ಬಿಕ್ಕಿ ಬಿಕ್ಕಿ ಕಣ್ಣೀರು ಹಾಕಿದ ಶ್ವಾನ; ವಿಡಿಯೋ ನೋಡಿ ಭಾವುಕರಾದ ಜನರು
ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ