ಭಕ್ತನ ಕಾಲಿನ ಮೇಲೆ ಹರಿದ ರಥದ ಗಾಲಿ

By Suvarna Web DeskFirst Published Mar 18, 2018, 8:55 PM IST
Highlights

ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

ಗದಗ (ಮಾ. 18):  ಭಕ್ತನ ಕಾಲಿನ ಮೇಲೆ ರಥದ ಗಾಲಿ ಹರಿದು ಭಾರೀ ಗಾಯವಾಗಿರುವ ಘಟನೆ ರೋಣ ತಾಲೂಕಿನ ಗಾಡಗೋಳಿ ಗ್ರಾಮದಲ್ಲಿ ನಡೆದಿದೆ. 

ಗಾಡಗೋಳಿ ಗ್ರಾಮದ ಎಚ್ಚರೇಶ್ವರ ಜಾತ್ರೆಯ ವೇಳೆ ನೂಕುನುಗ್ಗಲಿನ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  45 ವರ್ಷದ ಮುದಿಯಪ್ಪ ಕಾಲು ಕಳೆದುಕೊಂಡ ಭಕ್ತ.  ಗಾಯಾಳುವನ್ನು  ರೋಣ ತಾಲೂಕು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. 

click me!