ಲೋಕಸಭೆಗೆ ಹೋಗಲು ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ

Published : Apr 10, 2018, 11:58 AM ISTUpdated : Apr 14, 2018, 01:12 PM IST
ಲೋಕಸಭೆಗೆ ಹೋಗಲು ಒಪ್ಪಿಕೊಂಡ ಪ್ರಜ್ವಲ್ ರೇವಣ್ಣ

ಸಾರಾಂಶ

ಲೋಕಸಭೆಗೆ ಹೋಗಲು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ತಾತ ಎಚ್.ಡಿ ದೇವೇಗೌಡ ಅವರ ಸಲಹೆಯಂತೆ ಅವರು ಇದೀಗ ತಮ್ಮ ಒಪ್ಪಿಗೆಯನ್ನು ತಿಳಿಸಿದ್ದಾರೆ.

ಬೆಂಗಳೂರು : ಲೋಕಸಭೆಗೆ ಹೋಗಲು ಜೆಡಿಎಸ್ ಮುಖಂಡ ಪ್ರಜ್ವಲ್ ರೇವಣ್ಣ ಒಪ್ಪಿಕೊಂಡಿದ್ದಾರೆ. ತಾತ ಎಚ್.ಡಿ ದೇವೇಗೌಡ ಅವರ ಸಲಹೆಯಂತೆ ಅವರು ಇದೀಗ ತಮ್ಮ ಒಪ್ಪಿಗೆಯನ್ನು ತಿಳಿಸಿದ್ದಾರೆ.

 ಇನ್ನು ಆರ್ ಆರ್ ನಗರ ಹೊರತಾಗಿ ಬೇರೆ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಲು ಆಫರ್ ಬಂದರೂ ಕೂಡ ಅವರು ನಿರಾಕರಿಸಿದ್ದಾರೆ. ಪ್ರಜ್ವಲ್’ಗೆ ಯಲಹಂಕ ,ಕೆ ಆರ್ ಪೇಟೆ ಕ್ಷೇತ್ರದಲ್ಲಿ ಸ್ವರ್ಧೆಗೆ ಅವಕಾಶ ಬಂದು, ವರಿಷ್ಠರಿಂದ ಅನುಮತಿಯೂ ಸಿಕ್ಕಿದ್ದರೂ ಕೂಡ ಅವರು ಒಪ್ಪಿಕೊಂಡಿಲ್ಲ.  

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಅವರು ಅಧಿಕಾರದ ಆಸೆಗೆ ನಾನು ಬಿದ್ದಿಲ್ಲ ನಾನು ವಿಧಾನಸಭಾ ಚುನಾವಣೆಗೆ ಈಗ ಸ್ಪರ್ಧಿಸಲ್ಲ. ಪದೇ ಪದೇ ಕ್ಷೇತ್ರ ಬದಲಿಸುವುದಿಲ್ಲ ಎಂದು ಆಪ್ತರಿಗೆ ಹೇಳಿದ್ದಾರೆ.  

ಅಲ್ಲದೇ ನನ್ನ ನಡೆಯಿಂದ ಕುಟುಂಬಕ್ಕೂ ಮತ್ತು ಪಕ್ಷಕ್ಕೂ ಧಕ್ಕೆ ತರುವುದಿಲ್ಲ.  ಹಾಗಾಗೀ ದೇವೇಗೌಡರ ಮಾತಿನಂತೆ ನಾನು ನಡೆಯುವೆ. ಪಕ್ಷ ಸಂಘಟನೆ ಕೆಲಸ ಮುಂದುವರಿಸುವೆ ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಸ್ಸಿ ಒಳ ಮೀಸಲಾತಿ ಜಾರಿ ವಿಧೇಯಕಕ್ಕೆ ಸಂಪುಟ ಅಸ್ತು: ಚಾರಿತ್ರಿಕ ಆದೇಶಕ್ಕೆ ಕಾನೂನು ಬಲ
ಹೈಕಮಾಂಡ್‌ ನಿರ್ಧಾರ ಫೈನಲ್, ಪದೇ ಪದೆ ಯಾಕೆ ಕೇಳ್ತೀರಿ?: ಸಿಎಂ ಸಿದ್ದರಾಮಯ್ಯ