
ನವದೆಹಲಿ (ನ.13): ಕೇಂದ್ರ ಸರ್ಕಾರದ ನೋಟು ನಿಷೇಧ ಕ್ರಮದ ವಿರುದ್ಧ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ಇಂದು ಕೂಡಾ ಮುಂದುವರೆಸಿದ್ಧಾರೆ.
ನೋಟು ನಿಷೇಧ ಕ್ರಮವು, ಕಪ್ಪು ಹಣವನ್ನು ಬಿಳಿ ಹಣವಾಗಿ ಪರಿವರ್ತನೆ ಮಾಡುವ ಇನ್ನೊಂದು ರೀತಿಯಾಗಿದೇ ಅಷ್ಟೇ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ರೂ.1000 ನೋಟು ನಿಷೇಧಿಸಿ, ರೂ.2000 ನೋಟು ಪರಿಚಯಿಸುವುದರಿಂದ ಭ್ರಷ್ಟಚಾರ ಹೇಗೆ ನಿಲ್ಲುತ್ತದೆ ಎಂದು ಪ್ರಶ್ನಿಸಿರುವ ಕೇಜ್ರಿವಾಲ್, ಇಂತಹ ಕ್ರಮದಿಂದ ಭ್ರಷ್ಟಚಾರಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲವೆಂದಿದ್ದಾರೆ.
ಕೇಂದ್ರ ಸರ್ಕಾರದ ನೋಟು ನೀತಿಯನ್ನು ದೊಡ್ಡ ಹಗರಣ ಎಂದು ನಿನ್ನೆ ಕೇಜ್ರಿವಾಲ್ ಬಣ್ಣಿಸಿದ್ದರು. ಪ್ರಧಾನಿ ಮೋದಿ ನೋಟು ರದ್ದು ಘೋಷಣೆ ಮಾಡುವ ಮೊದಲೇ ಈ ವಿಚಾರವನ್ನು ತನ್ನ ಎಲ್ಲ ಗೆಳೆಯರಿಗೆ ಬಿಜೆಪಿ ಹೇಳಿತ್ತು ಎಂದು ಅವರು ಆರೋಪಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.