ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
ನವದೆಹಲಿ (ಡಿ. 29): ನೋಟು ನಿಷೇಧ ಹಾಗೂ ಜಿಎಸ್ ಟಿ ಆರ್ಥಿಕತೆಗೆ ಹೊಸ ರೂಪಾಂತರ ನೀಡಲಿದೆ. ಸಾರ್ವಜನಿಕರಿಗೆ ಆಗಿರುವ ಅನಾನುಕೂಲವನ್ನು ಹೊರತುಪಡಿಸಿ ಅಭಿವೃದ್ದಿಯ ಮೇಲೆ ಕ್ಷಣಿಕ ಅಡ್ಡಪರಿಣಾಮವನ್ನು ಬೀರಿದೆ ಎಂದು ಆರ್ ಬಿಐ ಗವರ್ನರ್ ಊರ್ಜಿತ್ ಪಟೇಲ್ ಹೇಳಿದ್ದಾರೆ.
2016-17 ನೇ ಸಾಲಿನ ಕಾರ್ಪೋರೇಟ್ ವಲಯದಲ್ಲಿ ಆರ್ಥಿಕ ಸಾಧನೆ ಹೆಚ್ಚಾಗಿದೆ. ಮುಂಬರುವ ದಿನಗಳಲ್ಲಿ 500 ಹಾಗೂ 1000 ನೋಟುಗಳಲ್ಲಿ ಸ್ವಲ್ಪ ಮಟ್ಟಿಗೆ ಬದಲಾವಣೆ ಮಾಡಲಾಗುವುದು ಎಂದು ಊರ್ಜಿತ್ ಪಟೇಲ್ ಹೇಳಿದ್ದಾರೆ.