ನೋಟ್‌ ಬ್ಯಾನ್ ಬಳಿಕ ಆರ್ಥಿಕ ಪ್ರಗತಿ ಕುಂಠಿತ!: ರಾಜನ್

Published : Dec 18, 2018, 09:35 AM IST
ನೋಟ್‌ ಬ್ಯಾನ್ ಬಳಿಕ ಆರ್ಥಿಕ ಪ್ರಗತಿ ಕುಂಠಿತ!: ರಾಜನ್

ಸಾರಾಂಶ

ವಿಶ್ವವೇ ಮುಂದೆ ಸಾಗುವಾಗ ನಾವು ಹಿಂದೆ ಉಳಿದೆವು| ವಿವಿಧ ವರದಿಗಳು ಕೂಡ ಇದನ್ನೇ ಹೇಳಿವೆ

ನವದೆಹಲಿ[ಡಿ.18]: ಇಡೀ ವಿಶ್ವವೇ ಆರ್ಥಿಕವಾಗಿ ಹೆಚ್ಚಿನ ಪ್ರಗತಿ ಹೊಂದುತ್ತಿರುವಾಗ ಕೇಂದ್ರ ಸರ್ಕಾರ ಜಾರಿಗೆ ತಂದ ಅಪನಗದೀಕರಣದಿಂದಾಗಿ ಭಾರತದ ಆರ್ಥಿಕ ಬೆಳವಣಿಗೆ ದರ ಕುಂಠಿತವಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಮಾಜಿ ಗವರ್ನರ್‌ ರಘುರಾಂ ರಾಜನ್‌ ಪುನರುಚ್ಚರಿಸಿದ್ದಾರೆ.

2017ರಲ್ಲಿ ವಿಶ್ವ ಶರವೇಗದ ಪ್ರಗತಿ ಹೊಂದುತ್ತಿತ್ತು. ಆ ಸಂದರ್ಭದಲ್ಲಿ ಅಪನಗದೀಕರಣದಿಂದಾಗಿ ಭಾರತದ ಬೆಳವಣಿಗೆ ದರ ಮಂದವಾಯಿತು ಎಂಬುದು ನನ್ನ ಒಟ್ಟಾರೆ ಅಭಿಪ್ರಾಯ. ವಿವಿಧ ವರದಿಗಳು ಕೂಡ ಇದನ್ನೇ ದೃಢೀಕರಿಸಿವೆ. ಅಪನಗದೀಕರಣ ಮಾತ್ರವೇ ಅಲ್ಲದೆ ಜಿಎಸ್‌ಟಿ ಕೂಡ ಪ್ರಗತಿ ಕುಂಠಿತಗೊಳ್ಳುವುದಕ್ಕೆ ಕೊಡುಗೆ ನೀಡಿತು ಎಂದು ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಆದರೆ ನನ್ನನ್ನು ಜಿಎಸ್‌ಟಿ ವಿರೋಧಿ ಎನ್ನುವ ಮೊದಲೇ ಒಂದು ಹೇಳಿಬಿಡುತ್ತೇನೆ. ಜಿಎಸ್‌ಟಿ ಎಂಬುದು ದೀರ್ಘಾವಧಿಯಲ್ಲಿ ಉತ್ತಮ ಆಲೋಚನೆ. ಅಲ್ಪಾವಧಿಯಲ್ಲಿ ಅದರಿಂದ ಅಡ್ಡ ಪರಿಣಾಮಗಳು ಇವೆ ಎಂದು ಹೇಳಿದ್ದಾರೆ.

ನೋಟು ಬಂದಿ ನಿರ್ಧಾರ ಕುರಿತು ಕೇಂದ್ರ ಸರ್ಕಾರ ತಮ್ಮನ್ನು ಸಂಪರ್ಕಿಸಿತ್ತೇ ಎಂಬ ಪ್ರಶ್ನೆಗೆ, ಕಪ್ಪು ಹಣಕ್ಕೆ ಕಡಿವಾಣ ಹಾಕಲು ವ್ಯವಸ್ಥೆಯಿಂದ ದುಬಾರಿ ಮೌಲ್ಯದ ನೋಟುಗಳನ್ನು ರದ್ದುಗೊಳಿಸುವ ಕುರಿತು ನನ್ನ ಅಭಿಪ್ರಾಯವನ್ನು ಕೇಳಿದ್ದರು. ಆದರೆ ಅದು ಕೆಟ್ಟಆಲೋಚನೆ ಎಂದಿದ್ದೆ ಎಂದು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್