ತರೂರ್ ಸಾವು ಮರು ತನಿಖೆಗೆ ದೆಹಲಿ ಪೊಲೀಸರ ನಿರ್ಧಾರ

Published : May 27, 2017, 08:33 PM ISTUpdated : Apr 11, 2018, 12:45 PM IST
ತರೂರ್ ಸಾವು ಮರು ತನಿಖೆಗೆ ದೆಹಲಿ ಪೊಲೀಸರ ನಿರ್ಧಾರ

ಸಾರಾಂಶ

ಸುನಂದಾ ಪುಷ್ಕರ್​ ಸಾವಿಗೂ ಮೊದಲಿನ ಫೋನ್ ಸಂಭಾಷಣೆಯನ್ನು ರಿಪಬ್ಲಿಕ್​ ಟಿವಿ ಕಳೆದ ವಾರ ಪ್ರಸಾರ ಮಾಡಿತ್ತು. ಇದಾದ ನಂತರ ಸುನಂದಾ ಕೊಲೆ ಪ್ರಕರಣ ಸಮರ್ಪಕವಾಗಿ ತನಿಖೆಯಾಗಿಲ್ಲ ಎಂಬ ಒತ್ತಾಯ ಕೇಳಿ ಬಂದಿತ್ತು.

ನವದೆಹಲಿ(ಮೇ.27): ಮಾಜಿ ಕೇಂದ್ರ ಸಚಿವ ಶಶಿ ತರೂರ್​ ಪತ್ನಿ ಸುನಂದ ಪುಷ್ಕರ್ ಅನುಮಾನಸ್ಪದ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರು ತನಿಖೆಗೆ ದೆಹಲಿ ಪೊಲೀಸರು ನಿರ್ಧರಿಸಿದ್ದಾರೆ.

ತನಿಖೆ ವೇಳೆ ಕೆಲವು ವೈಫಲ್ಯ ಆಗಿರೋದನ್ನು ದೆಹಲಿ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ದೆಹಲಿಯ ಪೊಲೀಸ್​ ಅಧಿಕಾರಿಗಳು ಮಾಡಿದ್ದ ಟಿಪ್ಪಣಿ ಮತ್ತು ಎಲ್ಲ ಫೈಲ್ಸ್​ಗಳೂ ಸುವರ್ಣನ್ಯೂಸ್ ಸಹೋದರ ಸಂಸ್ಥೆ ರಿಪಬ್ಲಿಕ್​ ಟಿವಿಗೆ ಸಿಕ್ಕಿವೆ. ಈ ಫೈಲ್ಸ್​ಗಳಲ್ಲಿ ತನಿಖೆ ಸಮರ್ಪಕವಾಗಿ ಆಗಿಲ್ಲ ಅನ್ನೋದನ್ನ ಹಿರಿಯ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ. ಸುನಂದಾ ಪುಷ್ಕರ್​ ಸಾವಿಗೂ ಮೊದಲಿನ ಫೋನ್ ಸಂಭಾಷಣೆಯನ್ನು ರಿಪಬ್ಲಿಕ್​ ಟಿವಿ ಕಳೆದ ವಾರ ಪ್ರಸಾರ ಮಾಡಿತ್ತು. ಇದಾದ ನಂತರ ಸುನಂದಾ ಕೊಲೆ ಪ್ರಕರಣ ಸಮರ್ಪಕವಾಗಿ ತನಿಖೆಯಾಗಿಲ್ಲ ಎಂಬ ಒತ್ತಾಯ ಕೇಳಿ ಬಂದಿತ್ತು. ಈಗ ಪೊಲೀಸರೇ ದಾಖಲಿಸಿರುವ ಟಿಪ್ಪಣಿಗಳಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಎಂಬುದು ಸ್ಪಷ್ಟವಾಗಿದೆ. ರಿಪಬ್ಲಿಕ್​ ಟಿವಿ ವರದಿಗೆ ಪ್ರತಿಕ್ರಿಯಿಸಿರುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯಸ್ವಾಮಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದ್ದಾರೆ.  2014ರ ಜನವರಿ 17ರಂದು ದೆಹಲಿಯ ಫೈವ್ ಸ್ಟಾರ್ ಹೊಟೇಲ್​ವೊಂದರಲ್ಲಿ ಸುನಂದ ಪುಷ್ಕರ್ ರವರು ಸಾವನ್ನಪ್ಪಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾತ್ರಿ ಕಣ್ಣೇ ಕಾಣೊಲ್ಲವೆಂದು ಹಗಲಿನಲ್ಲಿಯೇ ಕಿರುತೆರೆ ನಟ ಪ್ರವೀಣ್ ಮನೆಗೆ ಕನ್ನ ಹಾಕಿದ ಇರುಳು ಕುರುಡ!
ಜೂನಿಯರ್ ಇಂದಿರೆ, ಪ್ರಚಂಡ ಪ್ರಿಯಾಂಕಾ; ಬದ್ಧವೈರಿಗಳ ಬಾಯಲ್ಲೇ ಗುಣಗಾನ