
ಪಣಜಿ (ಸೆ. 30): ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಒಂದು ದಿನವನ್ನು ಕಳೆದಿದ್ದಾರೆ. ಗೋವಾ ಕರಾವಳಿಯನ್ನು ಕಾವಲು ಕಾಯುತ್ತಿರುವ ಐಎನ್ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಶನಿವಾರ ರಾತ್ರಿಯನ್ನು ಕಳೆದ ರಾಜನಾಥ್ ಸಿಂಗ್, ಭಾನುವಾರ ಮುಂಜಾನೆ ನೌಕಾ ಸಿಬ್ಬಂದಿಯ ಜೊತೆ ಯೋಗಾಸನ ಮಾಡಿದರು.
ಭಾರತದ ತೆಕ್ಕೆಗೆ ರಫೇಲ್; ವಿಶೇಷತೆಗಳೇನು? ಇಲ್ಲಿದೆ ವಿವರ!
ಅಲ್ಲದೇ ಬ್ಲಾಕ್ ಪ್ಯಾಂಥರ್ಸ್ಎಂದೇ ಖ್ಯಾತಿಗಳಿಸಿರುವ ಏರ್ ಸ್ವಾರ್ಡರ್ನ್ 303 ಸಿಬ್ಬಂದಿಯ ಜೊತೆ ಸಂವಾದ ನಡೆಸಿದರು. ಈ ವೇಳೆ ತಾವೇ ಸ್ವತಃ ರೈಫಲ್ ಮೂಲಕ ಗುಂಡುಗಳನ್ನು ಹಾರಿಸಿದರು. ಇದೇ ವೇಳೆ ಟ್ವೀಟರ್ನಲ್ಲಿ ತಮ್ಮ ಅನುಭವ ಹಂಚಿಕೊಂಡ ರಾಜನಾಥ್, ಐಎನ್ಎಸ್ ವಿಕ್ರಮಾದಿತ್ಯ ನೌಕೆಯನ್ನು ‘ಸಿಕಂದರ್ ಆಫ್ ಸಮುಂದರ್’ (ಸಮುದ್ರದ ರಾಜ) ಎಂದು ಬಣ್ಣಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.