
ನವದೆಹಲಿ (ಫೆ.01): ಈ ಬಾರಿಯ ಬಜೆಟ್'ನಲ್ಲಿ ರಕ್ಷಣಾ ಕ್ಷೇತ್ರಕ್ಕೆ ಹಣಕಾಸು ಸಚಿವ ಅರುಣ್ ಜೇಟ್ಲಿ ರೂ. 2,74,114 ಕೋಟಿ ರೂಪಾಯಿಗಳನ್ನು ಮೀಸಲಾಗಿಟ್ಟಿದ್ದಾರೆ. ಕಳೆದ ಬಾರಿಗೆ ಹೋಲಿಸಿದಾಗ ಈ ಬಾರಿಯ ಅನುದಾನದಲ್ಲಿ ಶೇ.9.5 ಹೆಚ್ಚಳವಾಗಿದೆ. ರಕ್ಷಣಾ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದವರಿಗೆ ನೀಡಲಾಗುವ ಪಿಂಚಣಿ ಈ ಮೊತ್ತದಲ್ಲಿ ಒಳಗೊಂಡಿಲ್ಲ.
ಹೊಸದಾದ ಖರೀದಿಗಳಿಗೆ ಕಳೆದ ಬಾರಿಯ ಮೊತ್ತದಲ್ಲಿ ಶೇ.10 ರಷ್ಟು ಏರಿಕೆ ಮಾಡಲಾಗಿದೆ. ಕಳೆದ ಬಾರಿ 78586 ಕೋಟಿ ಮೀಸಲಾಗಿಟ್ಟಿದ್ದರೆ ಈ ಬಾರಿ ಒಟ್ಟು ಅನುದಾನದ ಪೈಕಿ ರೂ.86488 ಕೋಟಿಯು ಮೀಸಲಿಡಲಾಗಿದೆ.
ಕಳೆದ ಬಾರಿ ರಕ್ಷಣಾ ವಲಯಕ್ಕೆ 2,49,099 ಕೋಟಿ ರೂ.ಗಳನ್ನು ನೀಡಲಾಗಿತ್ತು.
ಸೇನಾ ಸಿಬ್ಬಂದಿಗಳ ಪಿಂಚಣಿ ವಿತರಣೆ ವ್ಯವಸ್ಥೆಯಲ್ಲಿರುವ ಅಡಚಚಣೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ವೆಬ್ ಆಧಾರಿತ ಸೇವೆ ಹಾಗೂ ಸೇನಾ ಸಿಬ್ಬಂದಿಗಳಿಗೆ ಕೇಂದ್ರೀಕೃತ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಆರಂಭಿಸುವುದಾಗಿ ಜೇಟ್ಲಿ ಈ ಬಜೆಟ್'ನಲ್ಲಿ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.